Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಸಾಸ್ತಾನ ಕಳಿಬೈಲು ಪವಾಡ|15 ವರ್ಷದ ಹಿಂದೆ ಕಳೆದಹೋದ ಚಿನ್ನ ಮರಳಿ ಮನೆಗೆ

 

ಸಾಸ್ತಾನ ಕಳಿಬೈಲು ಪವಾಡ|15 ವರ್ಷದ ಹಿಂದೆ ಕಳೆದಹೋದ ಚಿನ್ನ ಮರಳಿ ಮನೆಗೆ   - webnews kannada

ಕೋಟ: ಈಗಾಗಲೇ ಹಲವು ಪವಾಡಗಳ ಮೂಲಕ ನಂಬಿದವರ ಬೆಂಬಿಡದೆ ಇಷ್ಟಾರ್ಥ ನೆರವೇರಿಸಿದ ಸಾಸ್ತಾನ ಕೆಳಬೆಟ್ಟು ಮೂಡಹಡು ನೆಲೆನಿಂತ  ಕಳಿಬೈಲು ಕೊರಗಜ್ಜ ಇದೀಗ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಕುಟುಂಬವೊಂದಕ್ಕೆ ತನ್ನ ಕೃಪಾ ಕಟಾಕ್ಷವನ್ನು ಬೀರಿದ್ದಾನೆ.

By Webnewskannada

ಸಾಸ್ತಾನ ಕಳಿಬೈಲು ಪವಾಡ|15 ವರ್ಷದ ಹಿಂದೆ ಕಳೆದಹೋದ ಚಿನ್ನ ಮರಳಿ ಮನೆಗೆ   - webnews kannada

ಕೋಟ: ಈಗಾಗಲೇ ಹಲವು ಪವಾಡಗಳ ಮೂಲಕ ನಂಬಿದವರ ಬೆಂಬಿಡದೆ ಇಷ್ಟಾರ್ಥ ನೆರವೇರಿಸಿದ ಸಾಸ್ತಾನ ಕೆಳಬೆಟ್ಟು ಮೂಡಹಡು ನೆಲೆನಿಂತ

ಕಳಿಬೈಲು ಕೊರಗಜ್ಜ ಇದೀಗ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದ ಕುಟುಂಬವೊಂದಕ್ಕೆ ತನ್ನ ಕೃಪಾ ಕಟಾಕ್ಷವನ್ನು ಬೀರಿದ್ದಾನೆ.


ಘಟನೆ ವಿವರ:

ಸುಮಾರು 15 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪರಿಸರದ ಕುಟುಂಬದ ಯಜಮಾನನ ಕೈಯಲ್ಲಿದ್ದ 60 ಗ್ರಾಂ ತೂಕದ (ಸುಮಾರು 6 ಲಕ್ಷ ರೂ. ಮೌಲ್ಯದ ) ಬಂಗಾರದ ಬ್ರೈಸೆಲೆಟ್ಸ್ ಕಳೆದುಹೋಗಿದ್ದು ಯಜಮಾನ ಚಿಂತೆಯಲ್ಲಿ ಮುಳುಗಿದ್ದರು. ಎಲ್ಲಿ ಹುಡುಕಿದರೂ ಕಳೆದುಹೋದ ಬಂಗಾರ ಸಿಗದೇ ಇದ್ದಾಗ ಅದು ಮರೆತು ಬಿಟ್ಟಿದ್ದರು.


ಆದರೆ ಕಳೆದ ಒಂದು ವರ್ಷದ ಹಿಂದೆ ಮನೆ ಕೆಲಸದಾಕೆಗೆ ಮನೆಯ ಯಜಮಾನನ ಕೈಯಲ್ಲಿದ್ದ ಬಂಗಾರ ಸುಮಾರು 15 ವರ್ಷದ ಹಿಂದೆ ಕಳೆದುಹೋದ ವಿಚಾರ ಕಿವಿಗೆ ಬಿತ್ತು.


ಆ ಕ್ಷಣ ಕೆಲಸದಾಕೆಗೆ ಸ್ಮರಣೆಗೆ ಬಂದದ್ದು ಕಳಿಬೈಲು ಕೊರಗಜ್ಜ.

ಈಕೆ ಕಳಿಬೈಲು ಕೊರಗಜ್ಜನ ಭಕ್ತೆಯಾಗಿದ್ದಾಳೆ.

ಆ ಮಹಿಳೆ ಕೊರಗಜ್ಜನ ಸನ್ನಿದಾನಕ್ಕೆ ಬಂದು ಅನನ್ಯ ಭಕ್ತಿಯಿಂದ ಕೊರಗಜ್ಜನನ್ನು ನೆನದು  ತಾನು ಕೆಲಸ ಮಾಡುವ ಯಜಮಾನನ ಕೈಯಲ್ಲಿದ್ದ ಬಂಗಾರದ ಬ್ರೈಸೆಲೆಟ್ಸ್  ಸುಮಾರು 15 ವರ್ಷದ ಹಿಂದೆ ಕಳೆದು ಹೋಗಿದ್ದು. ಆ ಬಂಗಾರವನ್ನು ನೀನು ದೊರಕಿಸಿ ಕೊಟ್ಟರೆ  ಪೂಜೆ ಕೊಡುತ್ತೇನೆ ಎಂದು ಭಕ್ತೆ ಅನನ್ಯ ಭಕ್ತಿಯಿಂದ ಬೇಡಿಕೊಂಡಿದ್ದಳು.


ಭಕ್ತೆಯ ಬೇಡಿಕೆಗೆ ಮಣಿದ ಕೊರಗಜ್ಜ ಒಂದು ವರ್ಷದೊಳಗೆ ಪವಾಡ ಸದೃಷ ರೀತಿಯಲ್ಲಿ ಮನೆಯ ಯಜಮಾನನ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಳೆದುಹೋದ 60 ಗ್ರಾಂ ಚಿನ್ನದ 

ಬ್ರೈಸೆಲೆಟ್ಸ್ ಮನೆ ಕೆಲಸದಾಕೆಗೆ  ಸಿಕ್ಕಿರುತ್ತದೆ.


ಕೊರಗಜ್ಜನ ಮಹಿಮೆಗೆ ಭಾವ ಪರಶವಾದ ಮಹಿಳೆ ಮಣ್ಣಲ್ಲಿ ದೊರೆತ 60 ಗ್ರಾಂ ಬಂಗಾರದ ಬ್ರೈಸೆಲೆಟ್ಸ್ ನ್ನು ಪ್ರಾಮಾಣಿಕವಾಗಿ ಮನೆಯ ಯಜಮಾನಿಗೆ ನೀಡಿ. ಆ ಕುಟುಂಬದವರನ್ನು

ಕಳಿಬೈಲಿಗೆ ಕರೆತಂದು ಹರಕೆ ತೀರಿಸಿ ಕೊರಗಜ್ಜ ಮತ್ತು ಪರಿವಾರ ದೈವ ದೇವರುಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.






Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close