webnews kannada
Udupi -ಹಾಲೆಮರವನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ- ಡಾ.ರಶ್ಮಿ ಅಮ್ಮೆಂಬಳ
ಉಡುಪಿ ಪಿತ್ರೋಡಿಯ ಮೊಗವೀರಹಿತ್ಲುವಿನ ಶ್ರೀ ದತ್ತಾತ್ರೇಯ ಭಜನಾ ಮಂಡಳಿ ಮತ್ತು ಶ್ರೀ ದತ್ತಾತ್ರೇಯ ಮಹಿಳಾ ಮಂಡಳಿಯವರು ಆಯೋಜಿಸಿದ 'ಆಟಿಡೊಂಜಿ ದಿನ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಣಿಪಾಲ ಮಾಹೆಯ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನ ರೇಡಿಯೊ ಮಣಿಪಾಲದಲ್ಲಿ ಸಹಾಯಕ ಪ್ರಾಧ್ಯಾಪಕರು, ಸಂಯೋಜಕರು ಮತ್ತು ಸಂಶೋಧಕರಾಗಿರುವ ಡಾ.ರಶ್ಮಿ ಅಮ್ಮೆಂಬಳ ಆಟಿ ತಿಂಗಳ ಆಚರಣಾ ವಿಧಾನಗಳ ಮಹತ್ವವನ್ನು ವಿವರಿಸಿ ವಿನಾಶದ ಅಂಚಿನಲ್ಲಿರುವ ಹಾಲೆಮರಗಳನ್ನು ಉಳಿಸಿಬೆಳೆಸಬೇಕಾದ ಅನಿವಾರ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಮಕ್ಕಳು ಪ್ರದರ್ಶಿಸಿದ ಆಟಿಕಳಂಜ ಕುಣಿತ ನೆರೆದವರ ಗಮನ ಸೆಳೆಯಿತು. ಆಟಿತಿಂಗಳ ಮಹತ್ವವನ್ನು ಸಾರುವ ವಿವಿಧ ಭಕ್ಷ್ಯಗಳ ಭೋಜನ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ವೇದಿಕೆ ಯಲ್ಲಿ ಚೇತನ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಬಿತಾ ಸುರೇಶ್,ರಾಜೇಶ್ ಕುಂದರ್, ಐತಪ್ಪ ಕೋಟ್ಯಾನ್ ಹಾಗೂ ಶ್ರೀ ದತ್ತಾತ್ರೇಯ ಮಹಿಳಾ ಮಂಡಳಿ ಅಧ್ಯಕ್ಷೆ ಹರಿಣಿ ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.