Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ನಿಮ್ಮ ಬಳಿ ಈ ವಸ್ತುಗಳಿದ್ರೆ 'ರೇಷನ್‌ ಕಾರ್ಡ್‌' ರದ್ದಾಗುತ್ತೆ |Ration Card Rules-karavalivaninews


@karavalivani, @ಕರಾವಳಿವಾಣಿ
ನಮ್ಮ  ದೇಶಾದ್ಯಂತ ಸುಮಾರು 15 ಕೋಟಿ ಪಡಿತರ ಚೀಟಿದಾರರಿದ್ದಾರೆ. ಅದರಲ್ಲಿ ನೀವು ಒಬ್ಬರು ಹಾಗಾದರೆ, ಈ ಪಡಿತರ ಚೀಟಿದಾರರಿಗೆ ಸಂಬಂಧಿಸಿದ ಈ ಸುದ್ದಿಯನ್ನ ನೀವು ಓದಬೇಕು. ಕೋವಿಡ್ -19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಸರ್ಕಾರವು 2020ರಲ್ಲಿ ಬಡವರಿಗೆ ಉಚಿತ ಪಡಿತರ ಯೋಜನೆಯನ್ನ ಪ್ರಾರಂಭಿಸಿದ್ದು ನಮಗೆಲ್ಲ ಗೊತ್ತಿರುವ ವಿಷಯ

ಕೇಂದ್ರದ ಯೋಜನೆಯನ್ನ ಸೆಪ್ಟೆಂಬರ್ʼನಲ್ಲಿ ಕೊನೆಗೊಳ್ಳಲಿದೆ.ರೇಷನ್ ಕಾರ್ಡ್ ನಿಯಮಗಳು ಕಾಲಕಾಲಕ್ಕೆ ಬದಲಾಗುತ್ವೆ.!

ಇತ್ತೀಚೆಗೆ, ಅನರ್ಹರು ಸಹ 'ಉಚಿತ ಪಡಿತರ ಯೋಜನೆ'ಯ ಲಾಭವನ್ನ ಪಡೆಯುತ್ತಿದ್ದಾರೆ ಎಂದು ಸರ್ಕಾರಕ್ಕೆ ತಿಳಿದಿದೆ. ಅಂತಹ ಪರಿಸ್ಥಿತಿಯಲ್ಲಿ, ಸರ್ಕಾರವು ಕಾಲಕಾಲಕ್ಕೆ ಪಡಿತರ ಚೀಟಿದಾರರಿಗೆ ಸಂಬಂಧಿಸಿದ ನಿಯಮಗಳನ್ನ ಬದಲಾಯಿಸುತ್ತಲೇ ಇರುತ್ತದೆ. ಇತ್ತೀಚೆಗೆ, ಸರ್ಕಾರವು ಅನರ್ಹರಿಗೆ ಪಡಿತರ ಚೀಟಿಯನ್ನು ಒಪ್ಪಿಸುವಂತೆ ಮನವಿ ಮಾಡುತ್ತಿದೆ ಎಂದು ಮಾಧ್ಯಮ ವರದಿಯಲ್ಲಿ ವರದಿಯಾಗಿತ್ತು. ಪಡಿತರ ಚೀಟಿಯನ್ನು ಒಪ್ಪಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಈ ವರದಿಗಳು ತಿಳಿಸಿವೆ.

 ಪಡಿತರ ಚೀಟಿಗೆ ಸಂಬಂಧಿಸಿದ ನಿಯಮಗಳ ಬಗ್ಗೆ ಪ್ರತಿಯೊಬ್ಬ ಕಾರ್ಡ್ ಹೊಂದಿರುವವರು ತಿಳಿದಿರುವುದು ಬಹಳ ಮುಖ್ಯ. ನೀವು ತಪ್ಪು ಪಡಿತರ ಚೀಟಿಯನ್ನ ಮಾಡಿದ್ದರೆ ಮತ್ತು ಅದರ ಮೇಲೆ ಸರ್ಕಾರಿ ಪಡಿತರ ಯೋಜನೆಯ ಲಾಭವನ್ನ ಪಡೆಯುತ್ತಿದ್ದರೆ, ದೂರಿನ ಮೇಲೆ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ತನಿಖೆಯಲ್ಲಿ ದೂರು ಸರಿಯಾಗಿದೆ ಎಂದು ಕಂಡುಬಂದರೆ, ಆಗ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು.

ಪಡಿತರ ಚೀಟಿ ನಿಯಮಗಳು

ಕಿಡ್ನಿ ಸ್ಟೋನ್ ಇರುವವರು ಈ  ವಸ್ತುಗಳಿಂದ ದೂರವಿರಿ
ಪಡಿತರ ಚೀಟಿದಾರನು ತನ್ನ ಸಂಪಾದನೆಯಿಂದ 100 ಚದರ ಮೀಟರ್ ಪ್ಲಾಟ್ / ಫ್ಲ್ಯಾಟ್ ಅಥವಾ ಮನೆ, ನಾಲ್ಕು ಚಕ್ರದ ವಾಹನಗಳು / ಟ್ರ್ಯಾಕ್ಟರ್ಗಳು, ಶಸ್ತ್ರಾಸ್ತ್ರ ಪರವಾನಗಿ, ಗ್ರಾಮೀಣ ಪ್ರದೇಶಗಳಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ಕುಟುಂಬ ಆದಾಯ ಮತ್ತು ನಗರದಲ್ಲಿ ವಾರ್ಷಿಕವಾಗಿ 3 ಲಕ್ಷಕ್ಕಿಂತ ಹೆಚ್ಚು ಕುಟುಂಬ ಆದಾಯವನ್ನು ಹೊಂದಿದ್ದರೆ, ಅಂತಹ ಜನರು ಸರ್ಕಾರದ ಕೈಗೆಟುಕುವ ಪಡಿತರ ಯೋಜನೆಯ ಲಾಭವನ್ನ ಪಡೆಯಲು ಅರ್ಹರಲ್ಲ ಈ ಸುದ್ದಿ ಇಷ್ಟವಾದರೆ ನಿಮ್ಮವರಿಗೆಲ್ಲ ಶೇರ್ ಮಾಡಿ




Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close