ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗೆ ಹೆಚ್ಚಿನ ಪ್ರೋತ್ಸಾಹ( encouragement) (ನೀಡಬೇಕು- ಡಾ.ಕೆ.ಎಸ್ ಕಾರಂತ್-karavalivaninews
@karavalivani, @ಕರಾವಳಿವಾಣಿ
ಕೋಟ: ಮಕ್ಕಳಲ್ಲಿರುವ ಪ್ರತಿಭೆ (talent) ಹೊರತರಲು ಪೋಷಕರ ಪಾತ್ರ ಮಹತ್ವವಾದದ್ದು ಈ ಮೂಲಕ ಹೊಸ ಹೊಸ ಪ್ರತಿಭೆಗಳು ಹೊರಚುಮ್ಮಲು ಅನುವುಮಾಡಿಕೊಡಬೇಕು ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎಸ್ ಕಾರಂತ ಹೇಳಿದರು.
ಚಿತ್ರಪಾಡಿ (Senior Govt )ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೆತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೆತ್ರ ಸಂಪನ್ಮೂಲ ಕೇಂದ್ರ ಬ್ರಹ್ಮಾವರ ವಲಯ ಕಾರ್ಕಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2022-23 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಭಾ ಕಾರಂಜಿಯ ಮೂಲಕ ಮಕ್ಕಳ ಜೀವನುತ್ಸಾಹವನ್ನು ಅನಾವರಣ ಮಾಡುವ ಪ್ರಕ್ರೀಯೆ ಶಿಕ್ಷಣ ಸಂಸ್ಥೆಗಳ ಮೂಲಕ ಮಾಡುವುದು ಬಹಳ ಶ್ಲಾಘನೀಯ, ಮಕ್ಕಳು ಕೇವಲ ಅಂಕವನ್ನು ಗಳಿಸುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೋಡಗಿಕೊಳ್ಳಬೇಕು. ಪೋಷಕರು ಕೇವಲ ಮಕ್ಕಳಿಗೆ ಅತಿ ಹೆಚ್ಚು ಒತ್ತಡವನ್ನು ನೀಡುವುದು ಕಡಿಮೆ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯಲು ಅನುವುಮಾಡಿಕೊಡಬೇಕು ಎಂದು ಕರೆಇತ್ತರು
ಮುಖ್ಯ ಅತಿಥಿಯಾಗಿ ಕುಂದಾಪುರ ಭಂಡಾರ್ಸಕಾರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಾಘವೆಂದ್ರ ಭಟ್ ,ಶಾಲಾ ಎಸ್ಡಿಎಮ್ಸಿ ಅಧ್ಯಕ್ಷ ಶಂಕರ ದೇವಾಡಿಗ,ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯೆ ರತ್ನ ನಾಗರಾಜ ಗಾಣಿಗ ,ಆಂಜನೇಯ ಸೇವಾ ಟ್ರಸ್ಟ್ನ ಟ್ರಸ್ಟಿಯಾದ ನರಸಿಂಹ ಶ್ಯಾನುಭಾಗ್ ,ಹಳೆ ವಿದ್ಯಾರ್ಥಿ ಅರುಣ್ ಕುಂದರ್,ಬ್ರಹ್ಮಾವರ ಕ್ಷೆತ್ರ ಶಿಕ್ಷಣಾಧಿಕಾರಿ ರಂಗನಾಥ, ಶಿಕ್ಷಣ ಇಲಾಖೆ ಸಂಯೋಜಕ ಪ್ರಕಾಶ್.ಬಿ.ಬಿ, ಮಂದಾರ್ತಿ ಹೋಬಳಿ ನೋಡೆಲ್ ಅಧಿಕಾರಿ ರಾಘವ ಶೆಟ್ಟಿ,ಬಿಆರ್ಪಿ ನೋಡೆಲ್ ಅಧಿಕಾರಿ ಕೆ.ಎಸ್ ಮಂಜುನಾಥ,ಅಕ್ಷರರಥದ ಅಧ್ಯಕ್ಷ ನಾಗರಾಜ ಗಾಣಿಗ,ಹಳೆ ವಿದ್ಯಾರ್ತಿ ಸಂಘದ ಅಧ್ಯಕ್ಷರಾದ ಜಗದೀಶ ಉಪಾಧ್ಯಾಯ,ಸಿಆರ್ಪಿ ಸವಿತಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಸ್ವಾಗತಿಸಿದರು.ಕಾರ್ಯಕ್ರಮವನ್ನು ಶಾಲಾ ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ನಿರೂಪಿಸಿದರು.

