ಕಾಂಗ್ರೆಸ್ ಮುಖಂಡ ದಿವಂಗತ ಆಸ್ಕರ್ ಫರ್ನಾಂಡಿಸ್ರವರ ಪ್ರಥಮ ಪುಣ್ಯ ತಿಥಿ ನುಡಿನಮನ-Karavalivani
@karavalivani, @ಕರಾವಳಿವಾಣಿ
ಕೋಟ: ಕೋಟ ಬ್ಲಾಕ್ ಕಾಂಗ್ರೆಸ್(Block Congress) ಪಕ್ಷದ ವತಿಯಿಂದ ಕೋಟ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಭವನ ಕಾಂಗ್ರೆಸ್ ರಾಷ್ಟ್ರೀಯ ನಾಯಕ ದಿವಂಗತ ಆಸ್ಕರ್ ಫರ್ನಾಂಡಿಸ್ರವರ ಪ್ರಥಮ ಪುಣ್ಯ ತಿಥಿ ಸ್ಮರಣಾರ್ಥ, ಪುಷ್ಪ ನಮನ ಮತ್ತು ನುಡಿ ನಮನ ಕಾರ್ಯಕ್ರಮ ಜರುಗಿತು.
ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ರವರು ಅಸ್ಕರ್ ಫೆರ್ನಾಂಡಿಸ್ ರವರಿಗೆ ನುಡಿನಮನ ಸಲ್ಲಿಸಿದರು.
ಆಸ್ಕರ್ ಫೆರ್ನಾಂಡಿಸ್ ರವರು ಲೋಕಸಭಾ ಸದಸ್ಯರಾಗಿ, ರಾಜ್ಯಸಭಾ ಸದಸ್ಯರಾಗಿ,ಕೇಂದ್ರದ ಸಚಿವರಾಗಿ ಮತ್ತು ನಾಲ್ವರು ಪ್ರಧಾನಮಂತ್ರಿಗಳೊoದಿಗೆ ಕೆಲಸ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ವಿಶೇಷವಾಗಿ ಗಾಂಧಿ ಕುಟುಂಬದೊoದಿಗೆ ನಿಕಟ ಸಂಬoಧ ಹೊಂದಿದ್ದು, ಇವರ ಅಧಿಕಾರ ಅವಧಿಯಲ್ಲಿ ದೇಶಕ್ಕೆ ನೀಡಿದ ಹಲವಾರು ಕೊಡುಗೆಗಳನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರಸ್ ಮುಖಂಡರುಗಳಾದ ರಾಜು ಪೂಜಾರಿ, ಬಸವ ಪೂಜಾರಿ ಗುಂಡ್ಮಿ, ಬಾಲಕೃಷ್ಣ ಪೂಜಾರಿ ಸಾಸ್ತಾನ,ಅನಂತ ಸುಂದರ್ ಶೆಣೈ ಕೋಟ, ದಿನೇಶ್ ಬಂಗೇರ, ಗುಂಡ್ಮಿ, ಶ್ರೀನಿವಾಸ ಶೆಟ್ಟಿಗಾರ್, ರಾಜು ಪೂಜಾರಿ ಹಾಡಿಮನೆ, ಜೊನ್ಸನ್ ಹಂಗಾರಕಟ್ಟೆ, ಸೂರ್ಯಕಾಂತ ಶೆಟ್ಟಿ, ವಿಶ್ವನಾಥ್ ಕೋಟ, ಮಂಜನಾಥ ಪೊಜಾರಿ ಗೋಳಿ ಬೆಟ್ಟು, ರಮೇಶ್ ಆಚಾರ್ ಪಾಂಡೇಶ್ವರ ಸಾಸ್ತಾನ ಉಪಸ್ಥಿತರಿದ್ದರು. ಸಾಲಿಗ್ರಾಮ ಸ್ಥಾನೀಯ ಸಮಿತಿ ಕಾರ್ಯದರ್ಶಿ ರವೀಂದ್ರಕಾಮತ್ ಕಾರ್ಯಕ್ರಮ ನಿರೂಪಿಸಿದರು.

