ಸಾಸ್ತಾನ -ನಾರಾಯಣ ಗುರು ಜಯಂತೋತ್ಸವ ಮನುಕುಲದ ಗುರುಮಾಣಿಕ್ಯ ನಾರಾಯಣಗುರುಗಳು- ಗಣೇಶ ಪೂಜಾರಿ ಪಾಂಡೇಶ್ವರ-karavalivani
@karavalivani, @ಕರಾವಳಿವಾಣಿ
ಕೋಟ: ನಾರಾಯಣಗುರುಗಳ ತ್ವತ್ವ ಸಿದ್ಧಾಂತ ಇಡೀ ಮನುಕುಲದ ದೊಡ್ಡ ಶಕ್ತಿಯಾಗಿ ರೂಪಿಸಿತು ಎಂದು ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ ಇದರ ಗೌರವ ಸಲಹೆಗಾರ ಗಣೇಶ ಪೂಜಾರಿ ಪಾಂಡೇಶ್ವರ ಹೇಳಿದ್ದಾರೆ
ಗೋಳಿಗರಡಿ ದೈವಸ್ಥಾನದಲ್ಲಿ ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ ಇವರ ಆಶ್ರಯದಲ್ಲಿ ನಾರಾಯಣಗುರು ಜಯಂತೋತ್ಸವದ ಅಂಗವಾಗಿ ಪೂಜೆ ಮತ್ತು ಗುರುಗಳಿಗೆ ಪುಷ್ಪ ನಮನ ಕಾರ್ಯಕ್ರಮದಲ್ಲಿ ಮಾತನಾಡಿ ಅಸ್ಪçಶ್ಯತೆ ಹೋಗಲಾಡಿಸಿ ಇಡೀ ಜಗತ್ತಿನಲ್ಲಿ ಒಂದೇ ಜಾತಿ,ಮತ,ದೇವರು ಎಂಬ ಸಂದೇಶ ಸಾರಿದ ಮಹಾನ್ ದೇವಮಾನವರಲ್ಲಿ ಒರ್ವರಾದರು.ಸಮುದಾಯದ ಉನ್ನತಿಯ ಜೊತೆ ಇಂದಿನ ದಿನದಲ್ಲಿ ತತ್ವ ಸಿದ್ದಂತವನ್ನು ಪ್ರತಿಯೊಬ್ಬ ಬಿಲ್ಲವರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆನೀಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಗೊಳಿಗರಡಿ ಕ್ಷೇತ್ರದ ಪಾತ್ರಿಗಳಾದ ಶ್ರೀ ಶಂಕರ ಪೂಜಾರಿ ಇವರ ನೇತೃತ್ವದಲ್ಲಿ ಗುರುಪೂಜೆ ನೆರವೇರಿತು.
ಇದೇ ವೇಳೆ ಗುರುಗಳಿಗೆ ಸರ್ವರಿಂದ ಗುರುಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಬ್ರಹ್ಮ ಬೈದರ್ಕಳ ಮಹಿಳಾ ಭಜನಾ ಮಂಡಳಿಯಿoದ ಭಜನಾ ಕಾರ್ಯಕ್ರಮ ನೆರವೆರಿತು.
ಸಭೆಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಜಿ.ವಿಠಲ ಪೂಜಾರಿ, ಅಧ್ಯಕ್ಷ ಎಂ. ಚಂದ್ರಶೇಖರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಐರೋಡಿ ವಿಠಲ ಪೂಜಾರಿ, ಕೋಶಾಧಿಕಾರಿ ವಿಜಯ ಪೂಜಾರಿ, ಕಾರ್ಯದರ್ಶಿ ಚಂದ್ರಮೋಹನ ಪೂಜಾರಿ, ಗೌರವ ಸಲಹೆಗಾರರಾದ ಶಂಕರ ಪೂಜಾರಿ ಪಾತ್ರಿಗಳು, ಚೆನ್ನಾಯ್ಯ ಪೂಜಾರಿ ಐರೋಡಿ, ರತ್ನ ಜೆ ರಾಜ್, ಗಣೇಶ ಪೂಜಾರಿ, ಪಂಜು ಪೂಜಾರಿ, ಎಡಬೆಟ್ಟು,ಗಣಪ ಪೂಜಾರಿ ಐರೋಡಿ, ಜ್ಯೋತಿ ಉದಯ ಕುಮಾರ ಗ್ರಾಮ ವ್ಯಾಪ್ತಿಯ ಅಧ್ಯಕ್ಷರುಗಳಾದ, ಸುರೇಶ ಪೂಜಾರಿ ಪಾಂಡೇಶ್ವರ, ರಾಜು ಪೂಜಾರಿ ಮೂಡಹಡು, ಸುಧಾಕರ ಪೂಜಾರಿ ಐರೋಡಿ, ವಿಜಯ ಪೂಜಾರಿ ಬಾಳ್ಕುದ್ರು, ಸುರೇಶ ಪೂಜಾರಿ ಗುಂಡ್ಮಿ ಮತ್ತಿತರರರು ಉಪಸ್ಥಿತರಿದ್ದರು.

