Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಸಾಮಾಜಿಕ ಜಾಲ ತಾಣದಲ್ಲಿ ಸದ್ದು ಮಾಡಿದ ಕೋಟ ಗ್ರಾಮಪಂಚಾಯತ್ ಅಧ್ಯಕ್ಷರ ನಡೆ,ವ್ಯಾಪಕ ಪ್ರಶಂಸೆ-karavalivani


ಎಲ್ಲದಕ್ಕೂ ಸೈ ಎನ್ನಿಸಿಕೊಂಡ ಕೋಟ ಗ್ರಾಮಪಂಚಾಯತ್ ಅಧ್ಯಕ್ಷ
ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ ಅಧ್ಯಕ್ಷರ ನಡೆ

ಕೋಟ:ಇಲ್ಲಿನ ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಇವರ ಕಾರ್ಯಭಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿ ವೈರಲ್ ಆದ ಘಟನೆ ಮಂಗಳವಾರ ನಡೆದಿದೆ.(karavalivani)

ಸಾಮಾನ್ಯವಾಗಿ ಪಂಚಾಯತ್ ಅಧ್ಯಕ್ಷರೆಂದರೆ ಪಂಚಾಯತ್‌ಗೆ ಬಂದು ಕುಳಿತು ಅಲ್ಲಿರುವ ಛಕ್‌ಗಳಿಗೆ ,ಫೈಲ್‌ಗಳಿಗೆ ಸಹಿ ಹಾಕುವುದು ಸೇರಿದಂತೆ ಕಛೇರಿ ಒಳಗಿನಕಾರ್ಯಕ್ಕೆ ಸೀಮಿತಗೊಳ್ಳುತ್ತಾರೆ ಆದರೆ ಇಲ್ಲಿನ ಈ ಅಧ್ಯಕ್ಷರ ನಡೆ ಪಂಚಾಯತ್‌ನ ಎಲ್ಲಾ ಕೆಲಸಗಳಿಗೂ ಸೈ ಎನ್ನಿಸಿಕೊಳ್ಳುವ ಜಾಯಮಾನ ಅಜಿತ್ ದೇವಾಡಿಗರಾಗಿದ್ದಾರೆ.

ಕೋಟ ಪರಿಸರಸ ಸರಳ ವ್ಯಕ್ತಿತ್ವದ ಸ್ಥಳೀಯ ಜನಪ್ರತಿನಿಧಿ ಎಂಬ ಹೆಗ್ಗಳಿಗೆ ಈ ದೇವಾಡಿಗರಿಗೆ ಸಲ್ಲುತ್ತದೆ.ಕೋಟದ ಹಾಲಾಡಿ ಎಂದೇ ಖ್ಯಾತಿ ಪಡೆದಿರುವ ಇವರು ಮಂಗಳವಾರ ತನ್ನ ಪಂಚಾಯತ್ ಎಸ್‌ಎಲ್‌ಆರ್‌ಎಂ ಘಟಕದ ವಾಹನ ಚಾಲಕನ ರಜೆಯಿಂದ ಕಸ ಸಂಗ್ರಹಣೆ ಸಾಧ್ಯವಾಗದೆ ಘಟಕದ ಮುಖ್ಯಸ್ಥರು ತಲೆಮೇಲೆ ಕೈ ಇತ್ತು ಕೂರುವ ಸ್ಥಿತಿಯಲ್ಲಿದ್ದನ್ನು ಗಮನಿಸಿದ ಅಧ್ಯಕ್ಷ ಅಜಿತ್ ತಾನೇ ವಾಹನ ಏರಿ ಚಲಾಯಿಸಿಕೊಂಡು ಇಡೀ ದಿನ ತ್ಯಾಜ್ಯ ಸಂಗ್ರಹದ ಉಸ್ತುವಾರಿಯೊಂದಿಗೆ ಜನಸಾಮಾನ್ಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅದಲ್ಲದೆ ಪಂಚಾಯತ್‌ನಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ತಾನೆ ಕುರ್ಚಿ ಹಾಕಿ ಜನಸಾಮಾನ್ಯರಲ್ಲಿ ಸೈ ಎನಿಸಿಕೊಂಡಿದ್ದಾರೆ.


ತಾನೊಬ್ಬ ಪಂಚಾಯತ್ ಅಧ್ಯಕ್ಷ ಎನ್ನುವ ಅಹಂ ಇಲ್ಲದೆ ಕಾರ್ಯನಿರ್ವಹಿಸುವ ಇಂಥಹ ಜನಪ್ರತಿನಿಧಿಗಳು ಇತರರಿಗೆ ಜನಪ್ರತಿನಿಧಿಗಳಿಗೆ ಮಾದರಿ ಎಂದರೆ ತಪ್ಪಾಗಲಾರದು.

ಜನರಿಂದ ಆಯ್ಕೆಯಾಗಿದ್ದೇನೆ ಜನಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಸಾಮಾನ್ಯವಾಗಿ ನಮ್ಮ ಪಂಚಾಯತ್ ತ್ಯಾಜ್ಯ ವಿಲೇವಾರಿಯಲ್ಲಿ ಜಿಲ್ಲೆಗೆ ಮಾದರಿಯಾಗಿದೆ ,ಇದಕ್ಕೆ ಕುಂದು ಬರಬಾರದು ಎಂಬ ಉದ್ದೇಶದಿಂದ ಚಾಲಕನಾಗಿ ವಾಹನ ಏರಿದ್ದೇನೆ.

ಅಜಿತ್ ದೇವಾಡಿಗ ಅಧ್ಯಕ್ಷರು ಕೋಟ ಗ್ರಾಮಪಂಚಾಯತ್




Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close