ರಾಜಕೀಯ ಪ್ರೇರಿತವಾಗಿ ಕುಂದಾಪುರ ಪಿಪಿ ವರ್ಗಾವಣೆ: ದಿನೇಶ್ ಗಾಣಿಗ ಆರೋಪ -karavalivan
ಉಡುಪಿ: ಬಿಜೆಪಿ ಮುಖಂಡರು ಆರೋಪಿಗಳಾಗಿರುವ ಕೋಟ ಅವಳಿ ಕೊಲೆ ಪ್ರಕರಣ ಹಾಗೂ ಯಡಮೊಗೆ ಉದಯ ಗಾಣಿಗ ಹತ್ಯೆ ಪ್ರಕರಣ ಗಳಲ್ಲಿ ವಾದ(karavalivani) ಮಂಡಿಸುತ್ತಿರುವ ಕುಂದಾಪುರ ನ್ಯಾಯಾಲಯದ ಸರಕಾರಿ ಅಭಿ ಯೋಜಕ(ಪಿಪಿ) ಪ್ರಕಾಶ್ಚಂದ್ರ ಶೆಟ್ಟಿ ಅವರನ್ನು ಗೃಹ ಸಚಿವರು, ಕಾಣದ ಕೈಗಳ ಜೊತೆ ಸೇರಿಕೊಂಡು ರಾಜಕೀಯ ಪ್ರೇರಿತವಾಗಿ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ಕೋಟ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೊಲೆಯಾದ ಭರತ್ ತಾಯಿ ಪಾರ್ವತಿ, ಜ್ಯೋತಿ ಉದಯ ಗಾಣಿಗ, ದಿನಕರ ಗಾಣಿಗ ಮೊದಲಾದವರು ಹಾಜರಿದ್ದರು.
'ಸರಕಾರದ 5 ಲಕ್ಷ ಪರಿಹಾರ ಇನ್ನೂ ಸಿಕ್ಕಿಲ್ಲ'
"ಬೈಂದೂರು ಶಾಸಕರು ಒಂದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿ ಒಂದು ವರ್ಷವಾದರೂ ಕೊಟ್ಟಿರಲಿಲ್ಲ. ಕೆಲವು ದಿನಗಳ ಹಿಂದೆ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕೆ ಮೊನ್ನೆ ಬಂದು ಪರಿಹಾರ ಹಣ ನೀಡಿದ್ದಾರೆ. ಜಾಗದ ಹಕ್ಕುಪತ್ರ ಕೂಡ ಇನ್ನು ಕೂಡ ಮಾಡಿಕೊಟ್ಟಿಲ್ಲ"
ಜ್ಯೋತಿ, ಉದಯ ಗಾಣಿಗರ ಪತ್ನಿ

