ಗುಂಡ್ಮಿ ಸದಾನಂದ ರಂಗ ಮಂಟಪದಲ್ಲಿ ದಿ| ಶಂಕರ ನಾರಾಯಣ ಉಪಾಧ್ಯರ ಸಂಸ್ಮರಣಾ ಕಾರ್ಯಕ್ರಮ
ಕೋಟ: ಯಕ್ಷಗಾನ ಪೋಷಕರೂ,ಯಕ್ಷಗಾನ ಕಲಾಕೇಂದ್ರದ ಸರ್ವೋತೋಮುಖ ಅಭಿವೃಧ್ದಿಗೆ ಶ್ರಮಿಸಿದ್ದ ದಿವಂಗತ ಗುಂಡ್ಮಿ ಶಂಕರನಾರಾಯಣ ಉಪಾದ್ಯರ ಸಂಸ್ಮರಣಾ ದಿನವನ್ನು ಡಿ. 05 ರಂದು ಬಾನುವಾರ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮoಟಪದಲ್ಲಿ ಸಂಜೆ ಗಂಟೆ 5-30 ಕ್ಕೆ ಆಚರಿಸಲಾಗುವುದು. ದಿವಂಗತರ ನೆನಪಿನಲ್ಲಿ ಒಬ್ಬ ಅಶಕ್ತ ಕಲಾವಿದರಿಗೆ ಪ್ರತೀ ವರ್ಷ ನೀಡಲಾಗುವ ಪ್ರೋತ್ಸಾಹ ಧನವನ್ನು ಈ ವರ್ಷ ಕಲಾವಿದ ಮಹೇಶ ಮಂದಾರ್ತಿ ಇವರಿಗೆ ಹಸ್ತಾಂತರಿಸಲಾಗುವುದು. ಅಂದು ನಳ ದಮಯಂತಿ ಯಕ್ಷಗಾನ ಪ್ರದರ್ಶನವಿದ್ದು, ಕಲಾವಿದರಾದ ಚಂದ್ರಕಾoತ ಮೂಡುಬೆಳ್ಳೆ, ಕೆ.ಜೆ.ಸುಧೀಂದ್ರ, ಕೋಟ ಶಿವಾನಂದ, ಕೊಂಡದಕುಳಿ ರಾಮಚಂದ್ರ ಹೆಗಡೆ, ತೋಟಿಮನೆ ಗಣಪತಿ ಹೆಗಡೆ, ಮಂದಾರ್ತಿ ಪ್ರಸನ್ನ ಶೆಟ್ಟಿಗಾರ್, ಮುಗ್ವಾ ಗಣೇಶ ನಾಯಕ್ , ಚಪ್ರಮನೆ ಶ್ರೀಧರ ಹೆಗಡೆ, ಪ್ರತೀಶ್ ಕುಮಾರ್ ಬ್ರಹ್ಮಾವರ, ನರಸಿಂಹ ತುಂಗರು ಭಾಗವಹಿಸಲಿದ್ದಾರೆಂದು ಉಪಾಧ್ಯ ಕುಟುಂಬದ ರವೀಂದ್ರ ಉಪಾದ್ಯ ಮತ್ತು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
