ಮಲ್ಪೆಯ ಪರಿಸರದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಯುವಕನ ರಕ್ಷಣೆ ಮಾಡಿದ ಹೊಸಬೆಳಕು ಆಶ್ರಮ karavalivani
ಮಲ್ಪೆ ಗಾಂಧೀಜಿ ಪ್ರತಿಮೆಯ ಬಳಿ ಅಸಹಾಯಕ ಸ್ಥಿತಿಯಲ್ಲಿದ್ದ ಯುವಕನ ರಕ್ಷಣೆ ಮಾಡಲಾಯಿತು. ಊರು ದಾವಣಗೆರೆ, ಹೆಸರು ಮಲ್ಲಿಕಾರ್ಜುನ ಎಂದು ಹೇಳುತ್ತಿದ್ದಾರೆ. ಸರಿಯಾದ ಆಹಾರ ಇಲ್ಲದೆ ಸೊರಗಿದ್ದು, ಆರೋಗ್ಯದಲ್ಲಿ ಏರುಪೇರಾಗಿತ್ತು. ಮಲ್ಪೆಯ ಸಾರ್ವಜನಿಕರೊಬ್ಬರು ಕರೆ ಮಾಡಿ ಮಾಹಿತಿ ತಿಳಿಸಿದ ಕೂಡಲೇ ಆ ಯುವಕನ ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಯುವಕನ ರಕ್ಷಣಾ ಕಾರ್ಯದಲ್ಲಿ ಹೊಸಬೆಳಕು ಸಂಸ್ಥೆಯ ಸಂಸ್ಥಾಪಕರಾದ ತನುಲಾ ತರುಣ್, ವಿನಯಚಂದ್ರ, ಸುಜಯಾ ಶೆಟ್ಟಿ, ಮಂಜುನಾಥ ಬೈಲೂರು ಸಹಕರಿಸಿದರು.
