Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಬಾಂಧವ್ಯ ಫೌಂಡೇಶನ್ ನಿಂದ ಸಮವಸ್ತ್ರ ವಿತರಣೆ ಮತ್ತು ಶಿಕ್ಷಣೋಲ್ಲಾಸ ತರಬೇತಿ

 

ಬಾಂಧವ್ಯ ಫೌಂಡೇಶನ್ ನಿಂದ ಸಮವಸ್ತ್ರ ವಿತರಣೆ ಮತ್ತು ಶಿಕ್ಷಣೋಲ್ಲಾಸ ತರಬೇತಿ

ಇಂದು ಶ್ರೀನಿಕೇತನ ಹಿರಿಯ ಪ್ರಾಥಮಿಕ ಶಾಲೆ ಮಟಪಾಡಿ ಬ್ರಹ್ಮಾವರ ಶಾಲಾ ಮಕ್ಕಳಿಗೆ ಬಾಂಧವ್ಯ ಫೌಂಡೇಶನ್ ವತಿಯಿಂದ 85 ಮಕ್ಕಳಿಗೆ ಟ್ರಾಕ್ ಸಮವಸ್ತ್ರ ನೀಡಲಾಯಿತು.

By Webnewskannada

 

ಇಂದು ಶ್ರೀನಿಕೇತನ ಹಿರಿಯ ಪ್ರಾಥಮಿಕ ಶಾಲೆ ಮಟಪಾಡಿ ಬ್ರಹ್ಮಾವರ ಶಾಲಾ ಮಕ್ಕಳಿಗೆ ಬಾಂಧವ್ಯ ಫೌಂಡೇಶನ್ ವತಿಯಿಂದ 85 ಮಕ್ಕಳಿಗೆ ಟ್ರಾಕ್ ಸಮವಸ್ತ್ರ ನೀಡಲಾಯಿತು. ಬಾಂಧವ್ಯ ಫೌಂಡೇಶನ್ ನ ರೂವಾರಿ ದಿನೇಶ್ ಬಾಂಧವ್ಯ ಯೋಜನೆ ನೆಡೆದು ಬಂದ ದಾರಿ ಕುರಿತು ಪ್ರಾಸ್ತಾವಿಕ ಮಾತನಾಡಿದರು ಬ್ರಹ್ಮಾವರ ಬಿ ಆರ್ ಪಿ /ಬಿ ಆರ್ ಸಿ ಉದಯ್ ಕೋಟರವರು ತರಬೇತಿ ಕಾರ್ಯಗಾರ ನೆಡೆಸಿಕೊಟ್ಟರು ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಕಲಿಬೈಲ್ ನ ಅಭಿಜಿತ್ ಪಾಂಡೇಶ್ವರ, ಬ್ರಹ್ಮಾವರ ಪೊಲೀಸ್ ಠಾಣೆ ASI ಜಯಕರ್ ಐರೋಡಿ, ಕರ್ನಾಟಕ ಡ್ರೈವರ್ ವೇಲ್ಫರ್ ನ ರಾಜ್ಯ ಕಾರ್ಯದರ್ಶಿ ಕೆ ಸಂತೋಷ್ ನಾಯಕ್, ಶಾಲಾಭಿವೃದ್ಧಿ ಸಮಿತಿಯ ರಾಜರಾಮ್ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯರಾದ ಸುಧಾಕರ್ ಶೆಟ್ಟಿ, ಬಾಂಧವ್ಯ ಫೌಂಡೇಶನ್ ಸದಸ್ಯೆ ಉಷಾ ಬಸವರಾಜ್ ಕುಲಾಲ್, ಗ್ರಾಮ ಪಂಚಾಯತ್ ಸದಸ್ಯ ಚಂದ್ರ ಶೇಖರ್ ಪೂಜಾರಿ ಹಾಗೂ ಮಕ್ಕಳ ಪೋಷಕರು ಮತ್ತು ಶಿಕ್ಷಕರ ವೃಂದ ಮತ್ತಿತ್ತರು ಉಪಸ್ಥಿತರಿದ್ದರು, ಶಾಲಾ ಮುಖ್ಯೋಧ್ಯಾಯರಾದ ಶಿವರಾಮ್ ಶೆಟ್ಟಿ ನಿರೂಪಣೆ ಜೊತೆಗೆ ಸ್ವಾಗತಿಸಿದರು ಶಾಲಾ ಶಿಕ್ಷಕಿ ಶ್ರೀಮತಿ ದಿವ್ಯಾ ಧನ್ಯವಾದ ಸಮರ್ಪಿಸಿದರು.

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close