3333333
ಹೃದಯಾಘಾತಕ್ಕೆ ಒಂದೇ ದಿನ 11 ಮಂದಿ ಬಲಿ -webnews kannada
ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಮುಂದುವರಿದಿದ್ದು, ನಿನ್ನೆ ಒಂದೇ ದಿನ 11 ಮಂದಿ ಬಲಿಯಾಗಿದ್ದಾರೆ. ಹಾಸನ ಮತ್ತು ತುಮಕೂರಿನಲ್ಲಿ ತಲಾ ಮೂವರು, ಧಾರವಾಡದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ತುಮಕೂರಿನಲ್ಲಿ ಜಯಂತ್, ಶ್ರೀಧರ್, ತಮ್ಮಣ್ಣ ಕೊನೆಯುಸಿರೆಳೆದಿದ್ದಾರೆ. ಹಾಸನದಲ್ಲಿ ಸಯ್ಯದ್ ಮುಹಿದ್, ಸುರೇಶ್, ಲಕ್ಷ್ಮಣ ಸಾವನ್ನಪ್ಪಿದ್ದರೆ, ಧಾರವಾಡದಲ್ಲಿ ಶಾಂತವ್ವ, ಬಸಪ್ಪ, ಅನ್ನಪೂರ್ಣಮ್ಮ ಮತ್ತು ನಾರಾಯಣ ನಾಯ್ಕರ ಬಲಿಯಾಗಿದ್ದು, ಜನರಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿದೆ.

