ನೇಶನಲ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬೀಜಾಮೃತ ಕಾರ್ಯಕ್ರಮ
ಲಯನ್ಸ್ ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಬಾರ್ಕೂರು
(Dist 317c Region IV, Zone I)
ಲಯನ್ಸ್ ಕ್ಲಬ್ ಉಡುಪಿ ಅಮೃತ್
(Dist 317c Region IV, Zone II)
ನೇಶನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹನೆಹಳ್ಳಿ ಬಾರ್ಕೂರು ಇವರ ಜಂಟಿ ಆಶ್ರಯದಲ್ಲಿ
ಬೀಜಾಮೃತ ಕಾರ್ಯಕ್ರಮ ಇಂದು ನೇಶನಲ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರಗಿತು
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬಾರ್ಕೂರು ಇದರ ಅಧ್ಯಕ್ಷರಾದ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಬಾರ್ಕೂರು ಎಜ್ಯುಕೇಶನಲ್
ಸೊಸೈಟಿ ಉಪಾಧ್ಯಕ್ಷರಾಗಿರುವ ಬಿ. ಸೀತಾರಾಮ್ ಶೆಟ್ಟಿ ಹಾಗೂ ಲಯನ್ಸ್ ಕ್ಲಬ್ ಉಡುಪಿ ಅಮೃತ್ ಇದರ ಅಧ್ಯಕ್ಷರಾಗಿರುವ ಗೋಪಾಲ್ ಅಂಚನ್ ಅವರು
ಉದ್ಘಾಟಿಸಿದರು ಬಾರ್ಕೂರು ಲೈನ್ಸ್ ಕ್ಲಬ್ ನ ಮಾಜಿ ವಲಯಾಧ್ಯಕ್ಷರಾದ ಸುಧಾಕರ್ ಹೆಗ್ಡೆ , ಭಾರತಿ ಎಚ್.ಎಸ್ ( ವಲಯಾಧ್ಯಕ್ಷರು ಪ್ರಾಂತ್ಯ 01 ವಲಯ 02), ನೇಶನಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ Ln ಯು .ಕೊಟ್ರ ಸ್ವಾಮಿ ಉಪಸ್ಥಿತರಿದ್ದರು
ಲಯನ್ಸ್ ಕ್ಲಬ್ ಬಾರ್ಕೂರು ಇದರ ಅಧ್ಯಕ್ಷರಾದ ಶ್ರೀನಿವಾಸ್ ಶೆಟ್ಟಿ ಅವರು ಸ್ವಾಗತಿಸಿ, ಪ್ರಾಂಶುಪಾಲರಾದ Ln ಯು.ಕೊಟ್ರ ಸ್ವಾಮಿಯವರು ಧನ್ಯವಾದ ತಿಳಿಸಿದರು
ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಲಯನ್ಸ್ ಕ್ಲಬ್ ಕಾರ್ಯದರ್ಶಿಯವರಾದ
ಉದಯ ಎಸ್.ಶೆಟ್ಟಿಯವರು ಪ್ರಸ್ತಾವಿಕ ನುಡಿಗಳನ್ನಾಡಿದರು
ಶಿಕ್ಷಕಿ ಶ್ರೀಮತಿ ಶೈಲಜಾ ಅವರು ಕಾರ್ಯಕ್ರಮ ನಿರ್ವಹಿಸಿದರು
ಕರಾವಳಿ,web news kannada