ಸೇವಾ ಸಂಗಮ ಶ್ರೀ ನಾರಾಯಣ ಗುರು ಶಿಶುಮಂದಿರದಲ್ಲಿ ಇಂದು ರಕ್ಷಾ ಬಂಧನ ಕಾರ್ಯಕ್ರಮ
webNews
ಸೇವಾ ಸಂಗಮ ಶ್ರೀ ನಾರಾಯಣ ಗುರು ಶಿಶುಮಂದಿರದಲ್ಲಿ ಇಂದು ರಕ್ಷಾ ಬಂಧನ ಕಾರ್ಯಕ್ರಮ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ
ಮಾಡಲಾಯಿತು. ವೇದಮೂರ್ತಿ ಪ್ರಭಾಕರ ಬಾಯರಿ ಯವರು ರಕ್ಷಾಬಂಧನದ ಸಂದೇಶವನ್ನು ನೀಡಿದರು. ಹಿರಿಯರಾದ ಸುಧಾಕರ್ ರಾವ್ ರವರು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ನೀಡಿದರು.
ವೇದಿಕೆಯಲ್ಲಿ ಬಾರಕೂರಿನ ಉದ್ಯಮಿಗಳಾದ ರಾಘವೇಂದ್ರ ಪೂಜಾರಿ ಬಟ್ಟೆ ವಿನಾಯಕ ಎಲೆಕ್ಟ್ರಾನಿಕ್ಸ್, ವಿನಯ್ ಕುಮಾರ್ ಸಭ್ಯ ಮೊಬೈಲ್ಸ್, ಕುಶಲ್ ಪೂಜಾರಿ ನಮನ ಟ್ರಾನ್ಸ್ಪೋರ್ಟ್, ಗೌರವಾಧ್ಯಕ್ಷರಾದ ಯಶೋದಾ ಸುವರ್ಣ, ಮಾಜಿ ಅಧ್ಯಕ್ಷರಾದ ಜಾನವಿ ಪೂಜಾರಿ ಹಾಗೂ ಪೋಷಕ ಪ್ರತಿನಿಧಿ ಸ್ಮಿತಾ ಕೆ ಶಾಸ್ತ್ರಿ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಶಿಶುಮಂದಿರದ ಅಧ್ಯಕ್ಷರಾದ ಕೃಷ್ಣ ಜೀ ಪೂಜಾರಿಯವರು ವಹಿಸಿದ್ದರು.
ಅತಿಥಿ ಗಣ್ಯರು ಹಾಗೂ ಪುಟಾಣಿಗಳು, ಹಾಗೂ ಮಾತೆಯರು ರಕ್ಷಯನ್ನು ಕಟ್ಟುವುದರ ಮೂಲಕ ರಕ್ಷಾಬಂಧನದ ಆಚರಣೆಯನ್ನು ಮಾಡಲಾಯಿತು. ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಯನ್ನು ಆಚರಿಸಲಾಯಿತು. ಶಿಶುಮಂದಿರದ ಹಿರಿಯ ಹಿಂದಿನ ಸಹಾಯಕಿಯಾದ ರತ್ನಾವತಿ ಯವರನ್ನು ಸನ್ಮಾನಿಸಲಾಯಿತು. ಶಿಶುಮಂದಿರದ ಕಾರ್ಯದರ್ಶಿಯವರಾದ ಮಂಜುನಾಥ್ ಪೂಜಾರಿ ಅವರು ಧನ್ಯ ವಾದವನ್ನು ಸಮರ್ಪಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಶಿಶುಮಂದಿರದ ಉಪಾಧ್ಯಕ್ಷರಾದ ಪೂರ್ಣಿಮಾ ಎಸ್ ಅವರು ನೆರವೇರಿಸಿದರು.
ಕರಾವಳಿ,web news kannada