ಕೋಟ ಗ್ರಾಮಪಂಚಾಯತ್ ಜಮಾಬಂದಿ-karavalivaninews
@karavalivani, @ಕರಾವಳಿವಾಣಿ
ಕೋಟ: ಕೋಟ ಗ್ರಾಮಪಂಚಾಯತ್ 2021-22ನೇ ಸಾಲಿನ ವಾರ್ಷಿಕ ಲೆಕ್ಕಗಳ ಜಮಾಬಂದಿ ಗುರುವಾರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಕುರಿತು ಅದರ ಸಂಯೋಜಕ ರವೀಂದ್ರ ಮೊಗವೀರ ಮಾಹಿತಿ ನೀಡಿ ಯೋಜನೆಯ ಫಲಾನುಭವಿಗಳಿಗೆ ಬಾಂಡ್ ವಿತರಿಸಿದರು.
ಈ ವೇಳೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಕುರಿತು ಪಂಚಾಯತ್ ಸದಸ್ಯ ಚಂದ್ರ ಆಚಾರ್ಯ ಬೆಳೆ ಹಾನಿಯಾಗಿ 70ಗ.ಯೊಳಗೆ ಹಾನಿ ಕುರಿತು ಮಾಹಿತಿ ನೀಡುವ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿ ಈ ಕುರಿತು ಸಂಯೋಜಕರ ಗಮನ ಸೆಳೆದರು.
ಉಡುಪಿ ಜಿಲ್ಲಾ ತೋಟಗಾರಿಕಾ ಸಹಾಯಕ ನಿರ್ದೇಶಕ ಹೆಮಂತ್ ಕುಮಾರ್ ಜಮಾಬಂದಿಯನ್ನು ಉದ್ದೇಶಿಸಿ ಮಾತನಾಡಿ ಪಂಚಾಯತ್ ಅಭಿವೃದ್ಧಿಯಲ್ಲಿ ಗ್ರಾಮದ ಜನಸಾಮಾನ್ಯ ಸಹಬಾಗ್ವಿತ ಅತ್ಯಗತ್ಯ ,ಈ ದಿಸೆಯಲ್ಲಿ ಪಂಚಾಯತ್ ನಿರ್ದಿಷ್ಟ ದೃಷ್ಠಿಕೋನ ಇರಿಸಿ ಕಾರ್ಯನಿರ್ವಹಿಸಿದರೆ ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯ ಕೋಟ ಗ್ರಾಮಪಂಚಾಯತ್ ಪ್ರತಿಯೊಂದು ವಿಭಾಗದಲ್ಲಿ ಯಶಸ್ಸು ಕಾಣುತ್ತಿದೆ ಇದಕ್ಕೆ ಇಲ್ಲಿನ ಆಡಳಿತ ಕಾರ್ಯವೈಕರಿ ದಿಟ್ಟ ನಿರ್ಧಾರಗಳು ಸಾಕ್ಷಿಯಾಗಿವೆ ಎಂದರು.
ಪAಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಅಧ್ಯಕ್ಷತೆ ವಹಿಸಿದರು.ಜಮಾಬಂದಿಯ ವರದಿಯನ್ನು ಹಾವಂಜೆ ಪಂಚಾಯತ್ ಕಾರ್ಯದರ್ಶಿ ವಿಮಲಾಕ್ಷಿ ಮಂಡಿಸಿದರು.ಉಪಾಧ್ಯಕ್ಷೆ ಜಯಂತಿ ಪೂಜಾರಿ ಇದ್ದರು.ಜಮಾಬಂದಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ನಿರ್ವಹಿಸಿದರು.

