ಮಾಳೆಕೊಪ್ಪಲು ಗ್ರಾಮದಲ್ಲಿ ಬೃಹತ್ ಮರ ಬಿದ್ದು ಬೈಕ್ ಸವಾರ ಸಾವು -karavalivani
Karavalivani news ಹಾಸನ, ಆಗಸ್ಟ್ 07:
ಭಾರೀ ಗಾಳಿ, ಮಳೆಯಿಂದಾಗಿ ಬಾಗೂರು ರಸ್ತೆಯ
ಮಾಳೆಕೊಪ್ಪಲು ಗ್ರಾಮದಲ್ಲಿ ಬೃಹತ್ ಗಾತ್ರದ
ಮರವೊಂದು ಚನ್ನರಾಯಪಟ್ಟಣದಿಂದ ಬೈಕ್ನಲ್ಲಿ
ತೆರಳುತ್ತಿದ್ದಾಗ ಕಲ್ಲೇಸೋಮನಹಳ್ಳಿ ಗ್ರಾಮದ 40
ವರ್ಷದ ರಂಗಶೆಟ್ಟಿ ಮೇಲೆ ಬಿದ್ದಿದ್ದು,
ಕಲ್ಲೇಸೋಮನಹಳ್ಳಿ ಗ್ರಾಮದ 40 ವರ್ಷದ
ರಂಗಶೆಟ್ಟಿ ಎಂಬಾತ ಸ್ಥಳದಲ್ಲೇ ನರಳಾಡಿ
ಸಾವನಪ್ಪಿದ್ದಾರೆ ಮರದ ನಡುವೆ ಸಿಲುಕಿದ ರಂಗಶೆಟ್ಟಿ
ಅರ್ಧಗಂಟೆಗೂ ಹೆಚ್ಚು ಹೊತ್ತು ನರಳಾಡಿ ತನ್ನನ್ನ
ರಕ್ಷಿಸುವಂತೆ ಅಂಗಲಾಚಿದ್ದಾರೆ.
ಕೂಡಲೇ ಸ್ಥಳೀಯರು
ನೆರವಿಗೆ ಧಾವಿಸಿದ್ದು, ರಂಗಶೆಟ್ಟಿಯನ್ನು ರಕ್ಷಿಸಲು
ಮಾತ್ರ ಸಾಧ್ಯವಾಗಿಲ್ಲ. ಸ್ಥಳಕ್ಕೆ ಆಸ್ಪತ್ರೆಯ ಸಿಬ್ಬಂದಿ
ಬಂದು ಪ್ರಥಮ ಚಿಕಿತ್ಸೆ ನೀಡಿದರೂ ಆತನನ್ನು
ಜೀವಂತವಾಗಿ ಉಳಿಸಲು ಸಾಧ್ಯವಾಗಲಿಲ್ಲ.
ಏಕೆಂದರೆ ಅಷ್ಟು ದೊಡ್ಡ ಮರವನ್ನು ತೆಗೆಯಲು
ಸ್ಥಳೀಯರ ಕೈಯಿಂದ ಸಾಧ್ಯವಿರಲಿಲ್ಲ
ರಂಗಶೆಟ್ಟಿ
ನರಳಾಡುತ್ತಿದ್ದ, ದೃಶ್ಯ ಕಂಡು ಸ್ಥಳದಲ್ಲಿದ್ದವರು
ಮರುಗಿದರು. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ
ದಳದ ಸಿಬ್ಬಂದಿ 2 ಜೆಸಿಬಿ, ಹಿಟಾಚಿ ಯಂತ್ರ ಬಳಸಿ
ರಂಗಶೆಟ್ಟಿ ಮೃತದೇಹವನ್ನು ಹೊರತೆಗೆದರು.
ಶವಾಗಾರಕ್ಕೆ ಮೃತದೇಹ ರವಾನಿಸಲಾಗಿದ್ದು,
ಘಟನಾಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ
ನಡೆಸಿದರು. ಮರದ ಕೆಳಗೆ ಸಿಲುಕಿ ಬೈಕ್ ಸವಾರ
ಸಾವನ್ನಪ್ಪಲು ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ
ಕಾರಣ ಎಂದು ಸ್ಥಳೀಯರು ಕೆಲಕಾಲ ರಸ್ತೆ ತಡೆದು,
ಮರ ತೆರವುಗೊಳಿಸಲು ಬಿಡದೆ ಪ್ರತಿಭಟನೆ
ನಡೆಸಿದರು. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ
ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಳೇ
ಕಾಲದ ಮರವನ್ನು ತೆರವುಗೊಳಿಸುವಂತೆ ಕೆಲ
ದಿನಗಳ ಹಿಂದೆ ಅರಣ್ಯ ಇಲಾಖೆಗೆ ಗ್ರಾಮ
ಪಂಚಾಯಿತಿ ವತಿಯಿಂದ ಮನವಿ ಸಲ್ಲಿಸಿದ್ದರೂ
ಕೂಡ ಇದುವರೆಗೂ ತೆರವುಗೊಳಿಸಿಲ್ಲ ಇಂದು
ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು
ವಾಟ್ಸಾಪ್ ಟ್ರಿಕ್ಸ್..


