ಕೋಡಿ -ಉಚಿತ ನೋಟ್ ಪುಸ್ತಕ ವಿತರಣೆ-karavalivani.
ಕೋಟ: ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಕೋಡಿ ಕನ್ಯಾಣ ಸಂಸ್ಥೆಯ ವತಿಯಿಂದ ದಿ. ಲಕ್ಷ್ಮಿ ಸೋಮ ಬಂಗೇರ ಸ್ಮಾರಕ ಸರಕಾರಿ ಪ್ರೌಢ ಶಾಲೆ ಕೋಡಿ ಕನ್ಯಾಣ ಇದರ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಣೆ ಬುಧವಾರ ಮಾಡಲಾಯಿತು. ಈ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷ ಶಂಭು ಪೂಜಾರಿ ಹಾಗೂ ಉಪಾಧ್ಯಕ್ಷ ಮಹಾಬಲ ಕುಂದರ್, ನಿರ್ದೇಶಕರಾದ ಉದಯ ಕಾಂಚನ್,ರಾಘವೇoದ್ರ ಸುವರ್ಣ, ದಯಾನಂದ ಕರ್ಕೇರ ಮತ್ತು ಮುಖ್ಯಕಾರ್ಯನಿರ್ವಾಹಕರಾದ ರಾಘವೇಂದ್ರ ಕರ್ಕೇರ, ಶಾಲೆಯ ಮುಖ್ಯೋಪಾಧ್ಯಾಯ ರಾಧಿಕಾ ಹಾಗೂ ಅಧ್ಯಾಪಕರು, ಮತ್ತು ಆಡಳಿತ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.

