ಹಿರಿಯ ಗಾಂಧಿವಾದಿ ನರಸಿಂಹ ತುಂಗ ನಿಧನ today news karavalivani
ಕೋಟ: ಕೋಟತಟ್ಟು ನಿವಾಸಿ ಕೆ.ನರಸಿಂಹ ತುಂಗ(93ವ) ಶನಿವಾರ ಮುಂಜಾನೆ ವಯೋಸಹಜ ರೋಗದಿಂದ ನಿಧನರಾದರು.ಗಾಂಧಿವಾದಿಯಾಗಿ ಸ್ಥಳೀಯ(karavalivani) ನಿವಾಸಿಗಳಲ್ಲಿ ಸಾಕಷ್ಟು ಸಾಮಾಜಿಕ ನ್ಯಾಯಕ್ಕೆ ಒತ್ತುನೀಡುತ್ತಿದ್ದರು.ಹಿರಿಯ ಕೃಷಿಕರಾಗಿ ,ಧಾರ್ಮಿಕ ಕ್ಷೇತ್ರದಲ್ಲೂ ತನ್ನನ್ನು ತಾನು ತೋಡಗಿಸಿಕೊಂಡಿದ್ದರಲ್ಲದೆ ಸಾಹಿತಿ ಡಾ.ಕೋಟ ಶಿವರಾಮ ಕಾರಂತ ಹಾಗೂ ರಾಜಕಾರಣದಲ್ಲಿ ಮುಂಚೂಣಿಗೆ ನಿಂತ ತನ್ನೂರ ಕೋಟ ಶ್ರೀನಿವಾಸ ಪೂಜಾರಿಯವರ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದರು.ಪತ್ನಿ ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.
ಇಳಿವಯಸ್ಸಿನಲ್ಲೂ ಮತದಾನ ಜಾಗೃತಿ,ದೇಹದಾನ
ತನ್ನ ಇಳಿವಯಸ್ಸಿನಲ್ಲೂ ಅನಾರೋಗ್ಯದ ನಡುವೆಯೂ ಮತದಾನ ಕೇಂದ್ರದವರೆಗೆ ವೀಲ್ ಚೇರ್ ನಲ್ಲಿ ತೆರಳಿ ಮತದಾನದ ಜಾಗೃತಿ ಮೂಡಿಸುತ್ತಿದ್ದರು ಅಲ್ಲದೆ ತನ್ನ ನಿಧನದ ನಂತರ ದೇಹವನ್ನು ಕೆ.ಎಂ.ಸಿ ಗೆ 2010ರಲ್ಲೆ ರಿಜಿಸ್ಟçರ್ ಮಾಡಿಸಿಕೊಂಡಿದ್ದಾರೆ ಅದರಂತೆ ಮೃತದೇಹವನ್ನು ಕೆ.ಎಂ.ಸಿ ಗೆ ಸ್ಥಳಾಂತರಿಸಲಾಗಿದೆ.ಇವರ ನಿಧನಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂತಾಪ ಸೂಚಿಸಿದ್ದಾರೆ.ದೇಹದಾನ ಪ್ರಕ್ರಿಯೆಯಲ್ಲಿ ರೋಟರಿ ಕ್ಲಬ್ ಉಡುಪಿ ರಾಯಲ್ ಸಹಕಾರ ನೀಡಿತು.

