ಕೋಟ ಶ್ರೀ ಅಮೃತೇಶ್ವರಿ ದೇವಳಕ್ಕೆ ನ್ಯಾಯಾಧೀಶ ಆನಂದ್ ಎಂ ಭೇಟಿ-today news karavalivani
ಕೋಟ: ಕೋಟ ಶ್ರೀ ಅಮೃತೇಶ್ವರಿ(kota Ambrutheswari temple) ಹಲವು ಮಕ್ಕಳ ತಾಯಿ ದೇವಸ್ಥಾನಕ್ಕೆ ಕೊಳ್ಳೇಗಾಲ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಆನಂದ್ ಎಂ ಸಪತ್ನೀಕರಾಗಿ ಭೇಟಿ ನೀಡಿ,(Karavalivani) ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಸತೀಶ್ ಜಿ. ಹೆಗ್ಡೆ ನ್ಯಾಯಾಧೀಶರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ,ಶ್ರೀಕ್ಷೇತ್ರದ ಕಾರಣಿಕದ ಬಗ್ಗೆ ವಿವರಿಸಿದರು.
ವ್ಯವಸ್ಥಾಪನಾ ಸಮಿತಿ ಸದಸ್ಯ ಕದ್ರಿಕಟ್ಟು ಚಂದ್ರ ಪೂಜಾರಿ,ನ್ಯಾಯವಾದಿಗಳಾದ ಪ್ರಮೋದ್ ಹಂದೆ,ಮoಜುನಾಥ ಗಿಳಿಯಾರು,ಸ್ಥಳೀಯ ಪಂಚಾಯತ್ ಸದಸ್ಯ ಸಂತೋಷ್ ಪ್ರಭು ಹಾಗೂ ಅರ್ಚಕ ರೂಪೇಶ್ ಜೋಗಿ,ದೇವಳದ ವ್ಯವಸ್ಥಾಪಕ ಗಣೇಶ್ ಹೊಳ್ಳ, ಸಂದೇಶ್ ತೋಲಾರ್,ಅಪೂರ್ವ ಮತ್ತಿತರರು ಉಪಸ್ಥಿರಿದ್ದರು.

