ದಿ.ಪದ್ದು ಆಚಾರ್ ಸ್ಮರಣಾರ್ಥ ಬನ್ನಾಡಿ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ನೋಟ್ ಬುಕ್, ಲೇಖನಿ ಸಾಮಗ್ರಿ ವಿತರಣೆ- karavalivani
ಕೋಟ: ದಿ.ಪದ್ದು ಆಚಾರ್ ಸ್ಮರಣಾರ್ಥ ಬನ್ನಾಡಿ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ನೋಟ್ ಬುಕ್, ಲೇಖನಿ ಸಾಮಗ್ರಿಗಳು ಹಾಗೂ ವಡ್ಡರ್ಸೆ ಪ್ರಾಥಮಿಕ ಆರೋಗ್ಯ ಉಪಕೇಂದ್ರಕ್ಕೆ ಔಷದಿ ಕೊಡುಗೆ ಮತ್ತು ವಿಶೇಷ ಚೇತನರಿಗೆ ಸಹಾಯ ಧನ ವಿತರಣಾ ಕಾರ್ಯಕ್ರಮವು ಬನ್ನಾಡಿ ಪರಮಹಂಸ ಶಾಲೆಯಲ್ಲಿ ನಡೆಯಿತು. Karavalivani
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸಂಚಾಲಕ ಬಿ.ಅಜಿತ್ ಹೆಗ್ಡೆ ವಹಿಸಿದರು. ಕೋಟ-ಬ್ರಹ್ಮಾವರ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಸುಧಾಕರ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ನ ಪಿಹೆಚ್ಎಫ್ಗಳಾದ ಚಂದ್ರಶೇಖರ ಮೆಂಡನ್,ಪ್ರಭಾಕರ್ ಕುಂಭಾಶಿ, ವಿಶ್ವಕರ್ಮ ಮಹಾಸಭಾದ ಉಡುಪಿ ಯುವ ಘಟಕದ ಅಧ್ಯಕ್ಷ ಕೋಟ ರಾಮಕೃಷ್ಣ ಆಚಾರ್, ಕೋಟ-ಬ್ರಹ್ಮಾವರ ಲಯನ್ಸ್ ಕ್ಲಬ್ನ ಕಾರ್ಯದರ್ಶಿ ವಿಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಯ ಶಶಿಧರ ಶೆಟ್ಟಿ ಪ್ರಾಸ್ತಾವನೆ ಮಾಡಿದರು. ಸಹಾಯಧನವನ್ನು ರೋಟರಿ ಕ್ಲಬ್ನ ಪಿಹೆಚ್ಎಫ್ ಬಿ. ಸೀತಾರಾಮ ಆಚಾರ್ ಫಲಾನುಭವಿಗಳಿಗೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿಯರಾದ ಕಲಾವತಿ ಹಾಗೂ ಸುಷ್ಮಾ ನಿರೂಪಿಸಿ ವಂದಿಸಿದರು.
.jpg)
