ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ರಥೋತ್ಸವ ಸಂಪನ್ನ-karavalivani,
ಕೋಟ: ಪುರಾಣಪ್ರಸಿದ್ಧ ಕ್ಷೇತ್ರ ಕೂಟಮಹಾಜಗತ್ತು ಆಡಳಿತದ ಅಧೀನಕೊಳ ಪಟ್ಟ ಹದಿನಾಲ್ಕು ಗ್ರಾಮಗಳ ಶಕ್ತಿದೇವತೆ ಸಾಲಿಗ್ರಾಮದ ಶ್ರೀ ಗುರುನರಸಿಂಹ ಹಾಗೂ ಶ್ರೀ ಆಂಜನೇಯ ದೇವಸ್ಥಾನ ಇದರ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಭಾನುವಾರ ವಿವಿಧ ಧಾರ್ಮಿಕ ವಿಧಿವಿಧಾನಗಳ ನಡುವೆ ಸಂಪನ್ನಗೊoಡಿತು.ಸರಕಾರದ ಮಾರ್ಗಸೂಚಿಯ ಹಿನ್ನಲೆಯಲ್ಲಿ ಸರಳ ರೀತಿಯಲ್ಲಿ ಜಾತ್ರೋತ್ಸವ ಆಚರಿಸಲಾಯಿತು. ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ.ಎಸ್ ಕಾರಂತ್,ಉಪಾಧ್ಯಕ್ಷ ಗಣೇಶ್ ಮೂರ್ತಿ ನಾವಡ, ಕಾರ್ಯದರ್ಶಿ ಲಕ್ಷ್ಮಿನಾರಾಯಣ ತುಂಗ ಐರೋಡಿ,ಕೋಶಾಧಿಕಾರಿ,ವೇ ಮೂ ಪರುಶರಾಮ ಭಟ್,ಸದಸ್ಯರಾದ ಕೆ.ಅನಂತಪದ್ಮನಾಭ ಐತಾಳ್,ವೇ ಮೂ. ಚಂದ್ರಶೇಖರ ಉಪಾಧ್ಯ,ಎ.ಪಿ ಶ್ರೀಧರ ಕಾರಂತ,ಪಿ.ಸದಾಶಿವ ಐತಾಳ್,ಶ್ರೀಧರ ರಾವ್ ರಾವ್ ,ಅರ್ಚಕ ಪ್ರತಿನಿಧಿ ಜನಾರ್ಧನ ಅಡಿಗ ,ತಂತ್ರಿಗಳು ಉಪಸ್ಥಿತಿಯಲ್ಲಿ ನಡೆಯಿತು.
