ವಾರಂಬಳ್ಳಿ ಗ್ರಾಮ ಪಂಚಾಯತ್ ಹಾಗೂ ಪಶು ಸಂಗೋಪಾ ಇಲಾಖೆಯ ಸಹಯೋಗದೊಂದಿಗೆ ಬ್ರಹ್ಮಾವರ ಪಶು ಆಸ್ಪತ್ರೆಯಲ್ಲಿ ಬೀದಿ ನಾಯಿ ಸಂತಾನಹರಣ ಚಿಕಿತ್ಸೆ ಹಾಗೂ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ-karavalivani
ಬೀದಿ ನಾಯಿಗಳ ಸಂಖ್ಯೆ ಹೆಚ್ಚುವುದನ್ನು ತಪ್ಪಿಸಲು ಹಾಗೂ ಅವುಗಳು ರೇಬಿಸ್ನಿಂದ ಮುಕ್ತವಾಗಿಸಲು ಎಲ್ಲಾ ಗ್ರಾಮ ಪಂಚಾಯತಿಯವರು ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮತ್ತು ರೇಬಿಸ್ ರೋಗನಿರೋಧಕ ಲಸಿಕಾ ಶಿಬಿರ ಏರ್ಪಡಿಸುವ ಅಗತ್ಯತೆ ಇದೆ. ಈ ಹಿಂದೆ ಕೋಟದಲ್ಲಿ ನಾಯಿಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಎಂದು ಬ್ರಹ್ಮಾವರ ತಾಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಅರುಣ್ಕುಮಾರ್ ಶೆಟ್ಟಿ ನುಡಿದರು. ಅವರು ನ.30ರಂದು ವಾರಂಬಳ್ಳಿ ಗ್ರಾಮ ಪಂಚಾಯತ್ ಹಾಗೂ ಪಶು ಸಂಗೋಪಾ ಇಲಾಖೆಯ ಸಹಯೋಗದೊಂದಿಗೆ ಬ್ರಹ್ಮಾವರ ಪಶು ಆಸ್ಪತ್ರೆಯಲ್ಲಿ ನಡೆದ ಬೀದಿ ನಾಯಿ ಸಂತಾನಹರಣ ಚಿಕಿತ್ಸೆ ಹಾಗೂ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರದಲ್ಲಿ ಮಾತನಾಡಿದರು.
ನಾಯಿಗಳಿಗೆ ಯಾವುದೇ ರೀತಿಯಲ್ಲೂ ಪೆಟ್ಟಾಗದ ಹಾಗೆ ಅವುಗಳನ್ನು ಹಿಡಿದು ಶಸ್ತç ಚಿಕಿತ್ಸೆ ನೆರವೇರಿಸಿ ಎರಡು ದಿನಗಳ ಕಾಲ ಅವುಗಳನ್ನು ಆರೈಕೆ ಮಾಡಿ ಎಲ್ಲಿಂದ ಹಿಡಿದು ತಂದಿದ್ದೆವೋ ಅದೇ ಸ್ಥಳಕ್ಕೆ ಬಿಟ್ಟು ಬರಲಾಗುವುದು. ಸಂತಾನಹರಣ ಚಿಕಿತ್ಸೆಯಿಂದ ಅವುಗಳ ಸಂಖ್ಯೆ ಹೆಚ್ಚುವುದು ತಪ್ಪಲಿದೆ ಎಂದರು.
ಈ ಸಂದರ್ಭ ವಾರಂಬಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸದಾನಂದ ಪೂಜಾರಿ, ಮಾಜಿ ಅಧ್ಯಕ್ಷ ನವೀನ್ಚಂದ್ರ ನಾಯಕ್, ಮಾಜಿ ಸದಸ್ಯ ಎಸ್.ನಾರಾಯಣ, ಸದಸ್ಯರಾದ ನಿರಂಜನ್, ಪಿಡಿಓ ಫರ್ಜಾನ ಉಪಸ್ಥಿತರಿದ್ದರು.
ಪುಣೆಯ ಅನಿಮಲ್ ಪ್ರೊಟೆಕ್ಷನ್ ಮತ್ತು ವೆಲ್ಫೇರ್ ಸೊಸೈಟಿಯ ತಂಡದವರು 18 ಬೀದಿ ನಾಯಿಗಳನ್ನು ಹಿಡಿದರು. ನಂತರ ಅವುಗಳನ್ನು ಬ್ರಹ್ಮಾವರ ಪಶು ಆಸ್ಪತ್ರೆಯ ಹಳೆ ಕಟ್ಟಡಕ್ಕೆ ಸಾಗಿಸಿದ್ದು ಅಲ್ಲಿ ಕೇರಳದ ಡಾ. ಬಿಜುಪ್ರಸಾದ್ ಶಸ್ತ್ರಚಿಕಿತ್ಸೆ ನೆರವೇರಿಸಿದರು.
