ಮಣೂರು ಪಡುಕರೆ-ಶಾಲಾ ಗ್ರಾಹಕ ಕ್ಲಬ್ನ ಉದ್ಘಾಟನೆ.karavalivani
ಕೋಟ: ಸರಕಾರಿ ಸಂಯುಕ್ತ ಪ್ರೌಢಶಾಲೆ ಮಣೂರು-ಪಡುಕರೆ ಇಲ್ಲಿ ಶಾಲಾ ಗ್ರಾಹಕ ಕ್ಲಬ್ನ ಉದ್ಘಾಟನೆ ಮತ್ತು ಮಾಹಿತಿ ಶಿಬಿರ ಗುರುವಾರ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಉಡುಪಿ ಜಿಲ್ಲಾ ಬಳಕೆದಾರರ ವೇದಿಕೆ ಮತ್ತು ಗ್ರಾಹಕರ ಮಾಹಿತಿ ಕೇಂದ್ರದ ಸಂಚಾಲಕ ವಾದಿರಾಜ ಆಚಾರ್ಯ ಇವರು ಶಾಲಾ ಗ್ರಾಹಕ ಕ್ಲಬ್ ಉದ್ಘಾಟಿಸಿ ಬಳಕೆದಾರರ ವೇದಿಕೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾದ ಉಡುಪಿ ಗ್ರಾಹಕರ ಕ್ಲಬ್ ಸಹ ಸಂಚಾಲಕರು ಸಹ ಸಂಚಾಲಕ ಪ್ರೋ ಕೆ.ನಾರಾಯಣ್, ಗ್ರಾಹಕರ ಹಕ್ಕುಗಳು ಮತ್ತು ಜವಬ್ಧಾರಿ ಎಂಬ ವಿಷಯದ ಮಾಹಿತಿ ನೀಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ನಿರಂಜನ ನಾಯಕ್ ವಹಿಸಿದ್ದರು.
ಶಾಲಾ ಗ್ರಾಹಕ ಕ್ಲಬ್ನ ಸಂಚಾಲಕ, ಶಿಕ್ಷಕ ಶ್ರೀಧರ ಶಾಸ್ತಿç, ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು, ಕ್ಲಬ್ನ ಅಧ್ಯಕ್ಷೆ ಕುಮಾರಿ ತ್ರಿಶಾ ಸ್ವಾಗತಿಸಿದರು, ಕಾರ್ಯದರ್ಶಿ ಕು| ಶ್ರೇಯಾ ಧನ್ಯವಾದಗೈದರು.
