Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಯಶಸ್ವೀ-25, ಸಾಂಸ್ಕೃತಿಕ ನಿಧಿಗಾಗಿ ಸಾಧನೆಯ ಮಜಲುಗಳು ಅನಾವರಣ:ಕೈೂಕೂರು ಸೀತಾರಾಮ ಶೆಟ್ಟಿ karavalivani

 


ತೆಕ್ಕಟ್ಟೆ, ನ. 24: ಯಶಸ್ವೀ ಕಲಾವೃಂದ ಕಳೆದ ಇಪ್ಪನ್ನಾಲ್ಕು ಹರಯದ ಸಾಧನೆಯ ವಿವಿಧ ಮಜಲುಗಳನ್ನು ನರ‍್ಮಡಿಯಾಗಿಸುವುದಕ್ಕೆ ಕಾತುರತೆಯಿಂದ ಕಾದಿದೆ. ಆರ್ಥಿಕವಾಗಿ ಬಡತನ ಹೊಂದಿದ ಸಂಸ್ಥೆ ಸಾಧನೆಯ ಪಥದಲ್ಲಿ ಶ್ರೀಮಂತವಾಗಿದೆ. ವಿಶಿಷ್ಠ ಕಾರ್ಯಕ್ರಮವನ್ನು ನೆರವೇರಿಸಿ, ದೇಶ ವಿದೇಶಗಳಲ್ಲಿ ಭಾರೀ ಸುದ್ಧಿ ಮಾಡಿದ ಸಂಸ್ಥೆ ಯಶಸ್ವೀ ಕಲಾವೃಂದ. ಇಪ್ಪತ್ತ ಮೂರನೇ ವಯಸ್ಸಿನಲ್ಲಿ ಒಂದಷ್ಟು ಕನಸನ್ನು ತುಂಬಿಕೊ0ಡು ಇಪ್ಪತ್ತ ನಾಲ್ಕನೇ ಹರಯಕ್ಕೆ ಕಾದಿದೆ. 24ರಿಂದ 25ರ ತನಕ ವರ್ಷವಿಡೀ ವಾರಾತ್ಯದ ಕಾರ್ಯಕ್ರಮವನ್ನು ಏರ್ಪಡಿಸಿ ಕೊನೇಯ ಒಂದು ತಿಂಗಳನ್ನು ಪ್ರತೀ ನಿತ್ಯ ಸಾಂಸ್ಕೃತಿಕ ಹಬ್ಬವನ್ನಾಗಿ ಆಚರಿಸಲು “ಸಾಂಸ್ಕೃತಿಕ ನಿಧಿ” ಸಂಗ್ರಹಣೆಗಾಗಿ ನಾಂದಿ ಹಾಡಿದೆ ಎಂದು ತೆಕ್ಕಟ್ಟೆ ಶ್ರೀ ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ, ಯಕ್ಷಗುರು ಸೀತಾರಾಮ ಶೆಟ್ಟಿ ಕೈೂಕೂರು ಅಭಿಪ್ರಾಯಪಟ್ಟರು.

ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ನವೆಂಬರ್ 24ರಂದು “ಸಾಂಸ್ಕೃತಿಕ ನಿಧಿ” ಹಳೇ ವರ್ಷದ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ಸಾಧನೆಯ ಮಜಲುಗಳನ್ನು ಬರೆದ ಕರ ಪತ್ರವನ್ನು ಅನಾವರಣ ಮಾಡಿ ಕೈೂಕೂರು ಮಾತನಾಡಿದರು. 

ಡಿಸೆಂಬರ್ 11ರಂದು ಯಕ್ಷಕಾಶಿ ಕುಂದಾಪುರದಲ್ಲಿ ಸಾಲಿಗ್ರಾಮ ಮೇಳದ ಯಕ್ಷಗಾನ ‘ಧರ್ಮಾಧರ್ಮ ಸಂಘರ್ಷ’ ಸಾಂಸ್ಕೃತಿಕ ನಿಧಿ ಸಂಗ್ರಹಣೆಗಾಗಿ ಕಾರ್ಯಕ್ರಮ ಆಯೋಜಿಸಿಕೊಂಡು “ಯಶಸ್ವೀ-25”ಕ್ಕೆ ಛಾಲನೆ ನೀಡಿದ್ದಾರೆ. ಅತಿಥಿಗಳಾಗಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೋಟ ಸುದರ್ಶನ ಉರಾಳ, ಹೆರಿಯ ಮಾಸ್ಟರ್, ಉಪನ್ಯಾಸಕ ರಾಘವೇಂದ್ರ ತುಂಗ, ಉಪನ್ಯಾಸಕ ಶಂಕರನಾರಾಯಣ ಉಪಾಧ್ಯಾಯ, ಕಲಾವಿದ ಕೀರ್ತನ್ ಮಿತ್ಯಂತ ಹಾಲಾಡಿ, ಹರೀಷ್ ಕಾವಡಿ, ವಿಶ್ವಂಬರ ಅಲ್ಸೆ ಉಪಸ್ಥಿತರಿದ್ದರು. ಕಾರ್ಯದರ್ಶಿ ವೆಂಕಟೇಶ ವೈದ್ಯ ಸ್ವಾಗತಿಸಿ, ಪ್ರಶಾಂತ್ ಮಲ್ಯಾಡಿ ನಿರೂಪಣೆ ಮಾಡಿದರು.

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close