ದರ್ಶನ್ ಆಪ್ತ ಸೇರಿ ನಾಲ್ವರು ಅರೆಸ್ಟ್
ದರ್ಶನ್ ಆಪ್ತ ಸೇರಿ ನಾಲ್ವರು ಅರೆಸ್ಟ್
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ಜಾಮೀನು ರದ್ದಾದ ಬೆನ್ನಲ್ಲೇ A1 ಆರೋಪಿ ಪವಿತ್ರಾಗೌಡರನ್ನು ಅರೆಸ್ಟ್ ಮಾಡಲಾಗಿದೆ. ಇದೀಗ ದರ್ಶನ್ ಆಪ್ತ A14 ಆರೋಪಿ ಪ್ರದೋಶ್, ನಟ ದರ್ಶನ್ ಕಾರು ಚಾಲಕ A12 ಲಕ್ಷ್ಮಣ & A11 ಆರೋಪಿ ನಾಗರಾಜ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ಸ್ಪೆಕ್ಟರ್ ಸುಬ್ರಮಣ್ಯ & ತಂಡ ಆತನನ್ನು ಬಂಧಿಸಿದೆ. ಕೊಲೆ ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಇಂದು ಬೆಳಗ್ಗೆ ಮಹತ್ವದ ತೀರ್ಪು ನೀಡಿತ್ತು.

