Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಯಾದಗಿರಿ ಬೆಟ್ಟದ ಶ್ರೀ ದಂಡಗುಂಡ ಬಸವಣ್ಣ ಜಾತ್ರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ

 

ಯಾದಗಿರಿ ಬೆಟ್ಟದ ಶ್ರೀ ದಂಡಗುಂಡ ಬಸವಣ್ಣ ಜಾತ್ರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ

ಯಾದಗಿರಿ ಬೆಟ್ಟದ ಪವಿತ್ರ ಧಾರ್ಮಿಕ ಕ್ಷೇತ್ರವಾದ ಶ್ರೀ ದಂಡಗುಂಡ ಬಸವಣ್ಣ ದೇವಸ್ಥಾನ, ಸೇವಾ ಸಮಿತಿ ವಾಲ್ಮೀಕಿ ನಗರ, ಹಿರೇಅಗಸಿ (ಯಾದಗಿರಿ) ಇವರು ಆಯೋಜಿಸುವ 2025ನೇ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.

By Webnewskannada

ಯಾದಗಿರಿ ಬೆಟ್ಟದ ಶ್ರೀ ದಂಡಗುಂಡ ಬಸವಣ್ಣ ಜಾತ್ರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ

ಯಾದಗಿರಿ:

ಯಾದಗಿರಿ ಬೆಟ್ಟದ ಪವಿತ್ರ ಧಾರ್ಮಿಕ ಕ್ಷೇತ್ರವಾದ ಶ್ರೀ ದಂಡಗುಂಡ ಬಸವಣ್ಣ ದೇವಸ್ಥಾನ, ಸೇವಾ ಸಮಿತಿ ವಾಲ್ಮೀಕಿ ನಗರ, ಹಿರೇಅಗಸಿ (ಯಾದಗಿರಿ) ಇವರು ಆಯೋಜಿಸುವ 2025ನೇ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.

ಯಾದಗಿರಿ ಬೆಟ್ಟದ ಶ್ರೀ ದಂಡಗುಂಡ ಬಸವಣ್ಣ ಜಾತ್ರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ

ಈ ಕುರಿತು ನಿನ್ನೆ, 27/07/2025ರಂದು ನಡೆದ ಸಭೆಯಲ್ಲಿ, ದೇವಸ್ಥಾನದ ಅರ್ಚಕರಾದ ಶ್ರೀ ವೆ. ಮೂ. ಸಿದ್ದಯ್ಯ ಸ್ವಾಮಿ ಹಾಗೂ ಸ್ಥಳೀಯ ಗುರುಹಿರಿಯರ ಸಮ್ಮುಖದಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.


ದಿ.11/08/2025 ರಂದು ನಡೆಯುವ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳ ವಿವರ ಈ ರೀತಿಯಿದೆ:


🔸 ಬೆಳಗ್ಗೆ 6:00 ಗಂಟೆಗೆ: ಕರ್ತೃಗದ್ದಿಗೆಯಲ್ಲಿ ಮಹಾ ರುದ್ರಾಭಿಷೇಕ ಹಾಗೂ ಲಿಂಗ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಸಂದರ್ಭ ಲಿಂಗವನ್ನು "ಕಾಶಿ ವಿಶ್ವನಾಥ" ಎಂದು ನಾಮಕರಣ ಮಾಡಲಾಗುವುದು.

🔸 ಬೆಳಗ್ಗೆ 9:00 ಗಂಟೆಗೆ: ರಥಕ್ಕೆ ಕ್ಷೀರಾಭಿಷೇಕ ನಡೆಯಲಿದೆ.

🔸 ಬೆಳಗ್ಗೆ 11:00 ಗಂಟೆಗೆ: ಭಾವಚಿತ್ರ ಮೆರವಣಿಗೆ, ವಿವಿಧ ವಾದ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ.

🔸 ಸಂಜೆ 6:00 ಗಂಟೆಗೆ: ಭವ್ಯ ರಥೋತ್ಸವ ಜರುಗಲಿದೆ.

🔸 ರಾತ್ರಿ 8:00 ಗಂಟೆಗೆ: ಧಾರ್ಮಿಕ ಸಭೆ, ಭಜನೆ, ಕೈಕುಸ್ತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ಜಾತ್ರಾ ಮಹೋತ್ಸವದ ಸಂಭ್ರಮ ಹೆಚ್ಚಲಿದೆ.


ಜಾತ್ರಾ ಮಹೋತ್ಸವವನ್ನು ಭಕ್ತಿಭಾವದಿಂದ, ಶಿಸ್ತುಪಾಲನೆಯಿಂದ ಹಾಗೂ ಸಮಾಜದ ಏಕತೆಗೆ ಒತ್ತಿ ಹಚ್ಚುವಂತೆ ಆಚರಿಸಲು ಸೇವಾ ಸಮಿತಿ ಕಟಿಬದ್ಧವಾಗಿದೆ

ಕು. ಚಂದನ್ ಅವಂಟಿ ಇಡ್ಲೂರ್, ಯಾದಗಿರಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ 







Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close