ಬೆಣ್ಣೆಕುದ್ರು ಶಿವ ಪೂಜಾರಿ ಅವರಿಂದ ಬಾರ್ಕೂರು ಸಂತೆಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆ ಹಸ್ತಾoತರ

ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯಾವಾಗಿ ತೊಡಿಸಿಕೊಂಡಿರುವ ಬೆಣ್ಣೆ ಕುದ್ರು ಶಿವ ಪೂಜಾರಿಯವರು ಇಂದು ತಾನು ಕಲಿತ ಶಾಲೆಗೆ ತನ್ನಿಂದ ಏನಾದರೂ ಕಿಂಚಿತ್ತು ಸಹಾಯವಾಗಬೇಕೆಂಬ ಸದುದ್ದೇಶದಿಂದ ಶಾಲೆಗೆ ಬಿಸಿ ಊಟ ತಯಾರಿಸಲು ಅತೀ ಅಗತ್ಯವಿದ್ದ ಗ್ಯಾಸ್ ಸ್ಟವ್ ಹಾಗೂ ಕುಕ್ಕರನ್ನು ಶಾಲಾ ಮುಖ್ಯ ಶಿಕ್ಷಕಿಯಾದ ಶಾರದ ಕುಮಾರಿ ಅವರಿಗೆ ಹಸ್ತಾಂತರಿಸಿದರು
ಈ ಸಂದರ್ಭದಲ್ಲಿ ಭಾಸ್ಕರ್ ನಾಯಕ್ ಬಾರ್ಕೂರು (ನಿವೃತ್ತ ಗುಮಾಸ್ತರು ಮಾಹೆ ಶಿಕ್ಷಣ ಸಂಸ್ಥೆ), ಗಣೇಶ್ ಪೂಜಾರಿ ಹೊಸಾಳ, ಆನಂದ್ ಬಾರ್ಕೂರು, ಶಿಕ್ಷಕಿಯರಾದ ಶೈಲಜಾ, ಶೋಭಾ,ದಿವ್ಯ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಪ್ರಸ್ತಾವಿಕವಾಗಿ ಮಾತನಾಡಿದ ಮುಖ್ಯ ಶಿಕ್ಷಕಿ ಶಾರದ ಕುಮಾರಿ ಅವರು
ಈ ಹಿಂದೆಯೂ ಕೂಡ ನಮ್ಮ ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಶಿವ ಪೂಜಾರಿಯವರು
ನಮ್ಮ ಶಾಲೆಗೆ ತಮ್ಮಿಂದಾದ ಸಹಾಯ ಮಾಡುತ್ತಾ ಬಂದಿದ್ದಾರೆ ಅವರ ಸಮಾಜ ಸೇವೆ ಹೀಗೆ ನಿರಂತರ ಮುಂದುವರೆಯಲಿ ಎಂದು ಕೃತಜ್ಞತೆ ಸಲ್ಲಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಶಿವ ಪೂಜಾರಿಯವರು ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ಅವರಿಗೆ ಉತ್ತಮ ಸಂಸ್ಕಾರವನ್ನು ಕಲಿಸುವುದರ ಮೂಲಕ ಅವರನ್ನು ಸಮಾಜದಲ್ಲಿ ಒಳ್ಳೆ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ ಎಂದು ತಿಳಿಸಿದರು
ಶಿಕ್ಷಕಿ ಶೈಲಜಾ ಅವರು ಧನ್ಯವಾದ ಸಮರ್ಪಿಸಿದರು
ಕರಾವಳಿ,web news kannada