Udupi barkur ಬಾರ್ಕೂರು ಶೌರ್ಯ ತಂಡದವರು, ಸ್ಥಳೀಯರ ಸಹಕಾರದೊಂದಿಗೆ ಸುರಿಯುತ್ತಿರುವ ಮಳೆಯ ನಡುವೆಯೇ ಮರಗಳನ್ನು ಕಡಿದು ತೆರವು News
webnewskannada | Updated By: webnewskannada
ತೀವ್ರ ಗಾಳಿಗೆ ಬಾರ್ಕೂರು ಧರ್ಮಶಾಲೆ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದ ಸಮೀಪ ಬ್ರಹತ್ ಮರಗಳು ಹಲವಾರು ವಿದ್ಯುತ್ ಕಂಬಕ್ಕೆ,ಹಾನಿಯಾಗಿ ರಸ್ತೆ ಸಂಚಾರಕ್ಕೆ, ತಡೆಯಾಗಿತ್ತು, ಅದೇ ರೀತಿ ಬಾರ್ಕೂರು ರೈಲು ನಿಲ್ದಾಣ ಸಂಪರ್ಕ ರಸ್ತೆ ರಂಗನಕೆರೆ , ಬಂಡೀಠ ,ಬಳಿ ಮರ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು ತಕ್ಷಣ ಸ್ಥಳಕ್ಕೆ ಧಾವಿಸಿದ ಬಾರ್ಕೂರು ಶೌರ್ಯ ತಂಡದವರು,
ಸ್ಥಳೀಯರ ಸಹಕಾರದೊಂದಿಗೆ ಸುರಿಯುತ್ತಿರುವ ಮಳೆಯ ನಡುವೆಯೇ ಮರಗಳನ್ನು ಕಡಿದು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು ಈ ಕಾರ್ಯ ಚರಣಿಯಲ್ಲಿ ಸಹಕರಿಸಿದ ಬಾರ್ಕೂರು ಶೌರ್ಯ ತಂಡ ಮೆಸ್ಕಾಂ ಸಿಬ್ಬಂದಿ ವರ್ಗ ಅರಣ್ಯ ಇಲಾಖೆ ಸಿಬ್ಬಂದಿ ವರ್ಗ,ಸ್ಥಳೀಯ ರಿಕ್ಷಾ ಚಾಲಕರು, ಹಾಗೂ ಸಾರ್ವಜನಿಕರಿಗೆ ಧನ್ಯವಾದಗಳು ಈ ಸಂದರ್ಭದಲ್ಲಿ ಹನೆಹಳ್ಳಿಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ರಮಾನಂದ್ ಶೆಟ್ಟಿ, ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಕಾಶ್ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರಾದ ಶ್ರೀ ರವೀಂದ್ರ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಘಟಕ ಸಂಯೋಜಕಿ ಶ್ರೀಮತಿ ಕುಸುಮ ಹೆಬ್ಬಾರ್, ಬ್ರಹ್ಮಾವರ ಮೆಸ್ಕಾಂ ಶಾಖೆ 1 ರ ಸೆಕ್ಷನ್ ಆಫೀಸರ್ ಶ್ರೀ ಉದಯಖಾರ್ವಿ ಉಪಸ್ಥಿತರಿದ್ದರು




