ಕೋಡಿ- ಅತಿಸಾರ ಭೇದಿ ತಡೆಗಟ್ಟುವುದರ ಬಗ್ಗೆ ಮಾಹಿತಿ ಕಾಯಾಗಾರ- karavalivani
ಕೋಟ: ಕೋಡಿ ಗ್ರಾಮ ಪಂಚಾಯತ್ ಹಾಗೂ ಪ್ರಾಥಮಿಕ ಆರೋಗ್ಯ ಉಪಕೇಂದ್ರ, ಕೋಡಿ ಕನ್ಯಾಣ ಇವರ ಸಂಯುಕ್ತ ಆಶ್ರಯದಲ್ಲಿ
ಅತಿಸಾರ ಭೇದಿ ತಡೆಗಟ್ಟುವುದರ ಬಗ್ಗೆ ಮಾಹಿತಿ ಕಾರ್ಯಕ್ರಮ ಇತ್ತೀಚಿಗೆ ಪ್ರಾಥಮಿಕ ಆರೋಗ್ಯ ಉಪಕೇಂದ್ರ ಇಲ್ಲಿ ಜರಗಿತು.
ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಭಾಕರ ಮೆಂಡನ್ ಅಧ್ಯಕ್ಷತೆಯನ್ನು ವಹಿಸಿ ಉದ್ಘಾಟಿಸಿದರು.(www.karavalivani.com)
ಸಭೆಯಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ರವೀಂದ್ರ ರಾವ್ ಕುಡಿಯುವ ನೀರಿನೊಂದಿಗೆ ಮಳೆ ನೀರು ಸೇರಿ ಅತಿಸಾರ
ಭೇದಿಯಂತಹ ಕಾಯಿಲೆಗಳು ಬರುತ್ತದೆ ಹಾಗೂ ಅತಿಸಾರ ಭೇದಿ ಹಾಗೂ ಡೀ ಹೈಡ್ರೇಷನ್ ತಡೆಗಟ್ಟುವುದರ ಬಗ್ಗೆ ಯಾವ ರೀತಿ
ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ತಿಳಿಸಿದರು.
ಕಿರಿಯ ಆರೋಗ್ಯ ಸಹಾಯಕಿ ಅಮಿತಾ ಅತಿಸಾರ ಭೇದಿಯಿಂದ ಬಳಲುವವವರು ಓ.ಆರ್ಎಸ್ ಪಾನಕವನ್ನು ತಯಾರಿಸುವ ಬಗ್ಗೆ
ಪ್ರಾತ್ಯಕ್ಷಿಕೆಯನ್ನು ಗ್ರಾಮಸ್ಥರಿಗೆ ತೋರಿಸಿಕೊಟ್ಟರು. ಸಮುದಾಯ ಆರೋಗ್ಯ ಅಧಿಕಾರಿ ಪರಸಪ್ಪ, ಗ್ರಾಮ ಪಂಚಾಯತ್ ಸದಸ್ಯೆ
ಗೀತಾ ಖಾರ್ವಿ, ಆಶಾ ಕರ್ಯಕರ್ತೆಯವರಾದ ಗಾಯತ್ರಿ, ವಿನೋದಾ ,ಜ್ಯೋತಿ ಅಂಗನವಾಡಿ ಕಾರ್ಯಕರ್ತೆ ಮಲೀಲಾವತಿ ಹಾಗೂ
ಗ್ರಾಮಸ್ಥರು ಉಪಸ್ಥಿತರಿದ್ದರು.

