ಅಭಿಮಾನಿ ಮನೆಗೆ ಭೇಟಿ ನೀಡಿದ ಶಾಸಕ ಹಾಲಾಡಿ-karavalivani
ಕೋಟ: ಇಲ್ಲಿನ ಕೋಟ ಕದ್ರಿಕಟ್ಟು ನಿವಾಸಿ ಶಂಕರ್ ಕುಂದರ್ ಭಾನುವಾರ ಹೃದಯಾಘಾತದಿಂದ ನಿಧನ ಹೊಂದಿದ ಸುದ್ದಿ ತಿಳಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸೋಮವಾರ ತನ್ನ ಕಟ್ಟಾ ಅಭಿಮಾನಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಅವರ ಪುತ್ರ ಸಚಿನ್ ಕುಂದರ್ ಶಾಸಕರ ಬಳಿ ತಮ್ಮ ತಂದೆ ರಾಜಕಾರಣದಲ್ಲಿ ಸಕ್ರೀಯವಿಲ್ಲದಿದ್ದರೂ ಶಾಸಕ ಹಾಲಾಡಿಯವರ ಮೇಲಿನ ಅಭಿಮಾನ ಹಾಗೂ ಸ್ಪರ್ಧಿಸಿದ ದಿನಗಳಲ್ಲಿ ಮತಚಲಾವಣೆಗೆ ತನ್ನ ಕುಟುಂಬಿಕರನ್ನು ಜಾಗೃತಗೊಳಿಸುತ್ತಿದ್ದನ್ನು ಮೆಲುಕು ಹಾಕಿದರು.ತಂದೆ ಸಾವಿನ ವಿಷಯ ತಿಳಿದು ಭೇಟಿ ನೀಡಿದ ಶಾಸಕರಿಗೆ ಅಭಿಮಾನದ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪತ್ನಿ ಪುತ್ರಿ ,ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಸದಸ್ಯ ಚಂದ್ರ ಪೂಜಾರಿ ಕದ್ರಿಕಟ್ಟು ಮತ್ತಿತರರು ಉಪಸ್ಥಿತರಿದ್ದರು.

