Webnews kannada

   ಸೊಳ್ಳೆ ಕಡಿತದಿಂದ ಪಾರಾಗಲು 5 ವಿಧಾನಗಳು.ಕಾಳುಮೆಣಸಿನ ಕಡ್ಡಿ ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ. ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ. ಎಳನೀರು ಎಳನೀರು ಆರೋಗ್ಯ ವೃದ್ಧಿಗೆ ಮಾತ್ರವಲ್ಲ ಸೊಳ್ಳೆ ನಿಯಂತ್ರಿಸುವಲ್ಲಿಯೂ ಸಹಕಾರಿ. ಎಳನೀರಿಗೆ ಅರಿಶಿಣ ಮಿಕ್ಸ್ ಮಾಡಿ ಹಚ್ಚಿದರೆ ಸೊಳ್ಳೆ ಕಚ್ಚುವುದಿಲ್ಲ, ಇನ್ನು ಸೊಳ್ಳೆ ಕಚ್ಚಿರುವ ಕಲೆಯೂ ಬೇಗನೆ ಮಾಯವಾಗುವುದು. ಸೊಳ್ಳೆ ಪರದೆ ಇನ್ನು ಮಲಗುವಾಗ ಸೊಳ್ಳೆ ಪರದೆ ಬಳಸಿ. ಇದು ಸೊಳ್ಳೆ ಕಡಿತದಿಂದ ನಿಮ್ಮನ್ನು ಕಾಪಾಡುತ್ತದೆ  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Youtube Live- ನಿಮ್ಮಯಾವುದೇ ಶುಭಸಮಾರಂಭಗಳ YouTube ನೇರಪ್ರಸಾರಗಾಗಿ ಸಂಪರ್ಕಿಸಿ : 9632548123-WebNews Youtube Live

Webnews kannada 2

ಸರಕಾರದ ವಿಕೇಂಡ್ ಕರ್ಫ್ಯೂಗೆ ಜನಸಾಮಾನ್ಯರ ನಿರಾಸಕ್ತಿ, ಆಕ್ರೋಶ-karavalivani

ಕೋಟ: ಒಮಿಕ್ರಾನ್ ಹಾಗೂ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ  ಘೋಷಿಸಿದ ವೀಕೆಂಡ್ ಕರ್ಫ್ಯೂ ಗೆ ಜನಸಾಮಾನ್ಯರು ನಿರಾಸಕ್ತಿ ತೊರಿದ್ದು ಸರಕಾರದ ಈ ಕ್ರಮದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಶನಿವಾರ ಹಾಗೂ ಭಾನುವಾರದ ಕರ್ಫ್ಯೂ ಹಿನ್ನಲ್ಲೆಯನ್ನು ಲೆಕ್ಕಿಸದೆ ಕೋಟ ,ಸಾಲಿಗ್ರಾಮ,ಸಾಸ್ತಾನ,ತೆಕ್ಕಟ್ಟೆ ಭಾಗಗಳ ಜನಸಾಮಾನ್ಯರು ಹಾಗೂ ವ್ಯವಹಾರಿಕಾ ಕೇಂದ್ರಗಳು ಎಂದಿನoತೆ ತಮ್ಮ ಕಾರ್ಯಚಟುವಟಿಕೆಯನ್ನು ನಿರ್ವಹಿಸುತ್ತಿದ್ದು ಕಂಡುಬoತು.ಈ ಭಾಗಗಳ ಕೆಲವೇ ಕಲವು ವ್ಯವಹಾರಿಕಕೇಂದ್ರಗಳು ಬಂದ್ ಗೊಳಿಸಿದ್ದಲ್ಲದೆ ಇನ್ನುಳಿದಂತೆ  ಸಾಕಷ್ಟು  ಅಂಗಡಿ ಮುಂಗಟ್ಟುಗಳು ತೆರದು  ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿರತರಾದರು.

ವಿವಿಧ ಭಾಗಗಳಿಗೆ ಭೇಟಿ ನೀಡಿದ ತಹಶಿಲ್ದಾರ್ ,ಅಂಗಡಿ ಮುಂಗಟ್ಟು ಬಂದ್
ಇಲ್ಲಿನ ಕೋಟ,ಸಾಲಿಗ್ರಾಮ ,ಸಾಸ್ತಾನ ,ಸಾಯಿಬ್ರಕಟ್ಟೆ ಭಾಗಗಳಿಗೆ ಬ್ರಹ್ಮಾವರ ತಹಶಿಲ್ದಾರ್ ರಾಜಶೇಖರಮೂರ್ತಿ ಭೇಟಿ ನೀಡಿ ಸರಕಾರ ನಿಗದಿಪಡಿಸಿದ ಕೋವಿಡ್ ಮಾರ್ಗಸೂಚಿ ವಿಕೇಂಡ್ ಕರ್ಫ್ಯೂಗೆ ಸಹಕರಿಸುವಂತೆ ವ್ಯವಹಾರಿಕಾ ಕೇಂದ್ರಗಳಲ್ಲಿಮನವಿ ಮಾಡಿದರು.ಈ ಹಿನ್ನಲ್ಲೆಯಲ್ಲಿ  ಸ್ಥಳಕ್ಕೆ ಕೋಟ ಆರಕ್ಷಕರು ಸರಕಾರದ ವಿಕೇಂಡ್  ಕರ್ಫ್ಯೂ ಮಾರ್ಗಸೂಚಿಗೆ ಸಹಕರಿಸಿ ಎಂದು ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು.
 
ವ್ಯವಹಾರಸ್ಥರ ಆಕ್ರೋಶ
ಈ ನಡುವೆ ಕಳೆದೆರಡು ವರ್ಷಗಳಿಂದ ಎದುರಾಗುತ್ತಿರುವ ಲಾಕ್ ಡೌನ್ ಗಳಿಂದ ಜನಜೀವನ ದುಸ್ತರವಾಗಿದೆ.ವ್ಯವಹಾರಿಕಾ ಕೇಂದ್ರಗಳು ಕುಂಠಿತಗೊoಡಿದೆ.ಹೀಗಿರುವಾಗ ಇದೀಗ ಸ್ವಲ್ಪ ಮಟ್ಟಿಗೆ ಚೇತರಿಸುತ್ತಿದ್ದ ಸನ್ನಿವೇಶದಲ್ಲೆ ಸರಕಾರ ಪುನಃ  ವಿಕೇಂಡ್ ಕರ್ಫ್ಯೂ ಜಾರಿ ತಂದಿದೆ ಇದರಿಂದ ಭಾರಿ ಸಮಸ್ಯೆಯಾಗಿ ಪರಿಣಮಿಸಿದೆ ಇದೇ ರೀತಿ ಮುಂದುವರಿದರೆ ತಾವುಗಳು ಜೀವನ ನಡೆಸುವುದಲ್ಲ ಬದಲಾಗಿ ಜೀವ ತೆಗೆದುಕೊಳ್ಳುವ ಸ್ಥಿತಿ ಎದುರಾಗುತ್ತದೆ ಎಂದು ಮಾಧ್ಯಮದ ಮುಂದೆ ವ್ಯವಹಾರಸ್ಥರು ತಮ್ಮ ಅಳಲನ್ನು ತೋಡಿಕೊಂಡು ಆಕ್ರೋಶ ಹೊರಹಾಕಿದರು.

Next Post Previous Post
No Comment
Add Comment
comment url

Webnews kannada-3

WebNews kannada- 4

ಒಳ ಪೋಸ್ಟ್ -5

close