ಬ್ರಹ್ಮಾವರದ ಕುಂಜಾಲು ಸಮೀಪ -ಗೋಕಳ್ಳರು -karavalivani
ಬ್ರಹ್ಮಾವರದ ಕುಂಜಾಲು ಸಮೀಪ ಇವತ್ತು ಮುಂಜಾನೆ 3.45 ಕ್ಕೆ ಗೋಕಳ್ಳರು 1 ಕಾರಿನಲ್ಲಿ ಬಂದು 1 ದನವನ್ನು ಕಾರಿಗೆ ತುಂಬಿಸಿ ತೆಗೆದುಕೊಂಡು ಹೋದರು ಎಂಬ ಮಾಹಿತಿಯನ್ನು ಸ್ಥಳೀಯರು ಸಂಘಟನೆಗೆ ನೀಡಿದ್ದು ಮಾಹಿತಿ ಸಿಕ್ಕ ಕೂಡಲೇ ವಿಶ್ವ ಹಿಂದು ಪರಿಷದ್ ಬಜರಂಗದಳ ಬ್ರಹ್ಮಾವರ ಪ್ರಖಂಡದ ಅಧ್ಯಕ್ಷ ರಾದ ರಾಘವೇಂದ್ರಕುಂದರ್* ಜೆ.ಬಿ..ಹಾಗೂ ಶಶಿಕಾಂತ್ ಕುಂಜಾಲು ರಾಘವೇಂದ್ರ ( ರೂಪಾ ಬಾಟ್ಲಿಂಗ್ ) ಕೊಳಂಬೆ.ಜಯ ( ಕೋಟಿ) ಪೂಜಾರಿ.ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚೆ ನಡೆಸಿದರು ...ಹಾಗೂ ಬ್ರಹ್ಮಾವರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಗುರುನಾಥ್ ಹಾದಿಮನಿ ಅವರಿಗೆ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾಹಿತಿ ನೀಡಿದರು ...ಇದಕ್ಕೆ ಸ್ಪಂದಿಸಿದ ದಕ್ಷ ಅಧಿಕಾರಿ ಗುರುನಾಥ್ ಹಾದಿಮನಿ ಅವರು ಕೂಡಲೇ ಸಿಬ್ಬಂದಿ ಅವರನ್ನು ಸ್ಥಳಕ್ಕೆ ಕಳುಹಿಸಿ ಕ್ರಮಕ್ಕೆ ಸೂಚಿಸಿದರು ಕಠಿಣ ಕ್ರಮ ಜರುಗಿಸುವಂತೆ ವಿಶ್ವಹಿಂದು ಪರಿಷತ್ ಅಧ್ಯಕ್ಷ ರಾಘವೇಂದ್ರ ಕುಂದರ್ ಜೆ ಬಿ ಆಗ್ರಹಿಸಿದರು
