ಕೋಟ ಸಹಕಾರಿ ಸಂಘಕ್ಕೆ ತೃತೀಯ ಬಹುಮಾನ karavalivani
ಕೋಟ: ಪಡುಬಿದ್ರಿ ಸಹಕಾರಿ ವ್ಯವಸಾಕ ಸಂಘದ ಆಶ್ರಯದಲ್ಲಿ ಸಹಕಾರ ಸಂಗಮ ಸಮೃದ್ಧಿ ಸಂಭ್ರಮ ಶೀರ್ಷಿಕೆಯಡಿ ಸಹಕಾರಿ ಸಂಘಗಳ ಸಾಂಸ್ಕöÈತಿಕ ಸ್ಪರ್ಧಾ ಕಾರ್ಯಕ್ರಮ ದಿನಾಂಕ 2.1.2022ರಂದು ಪಡುಬಿದ್ರೆ ಬಂಟರ ಭವನದಲ್ಲಿ ನಡೆಯಿತು.ಈ ಸ್ಪರ್ಧೆಯಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕೋಟ ಸಹಕಾರಿ ವ್ಯವಸಾಯಕ ಸಂಘವು ತೃತೀಯ ಸ್ಥಾನ ಪಡೆಯಿತು. ಪ್ರಶಸ್ತಿಯನ್ನು ಕುಂದಾಪುರದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್ ವಿ, ಪಡುಬಿದ್ರೆ ಸಹಕಾರಿ ಸಂಘದ ಅಧ್ಯಕ್ಷ ವೈ, ಸುಧೀರ್ ಕುಮಾರ್,ಮುಖ್ಯಕಾರ್ಯನಿರ್ವಹಣಾಧಿಕಾರಿ ನಿಶ್ಚಿತಾ ಪಿ.ಎಚ್ ರವರು ವಿಜೇತರಿಗೆ ಬಹುಮಾನ ವಿತರಿಸಿದರು.
