ಸ್ವಚ್ಛತಾ ಕಾರ್ಯದಲ್ಲಿ ಯುವಕರ ಪಾತ್ರ ಈ ಕುರಿತು ರೇಡಿಯೋ ಮಣಿಪಾಲ್ 90.4 Mhz, ಎಂ.ಐ.ಸಿ ಕ್ಯಾಂಪಸ್, ಮಣಿಪಾಲ-ದೇಸಿ ಸೊಗಡುಸಮುದಾಯ ಬಾನುಲಿ ಕಾರ್ಯಕ್ರಮ ಆಯೋಜನೆ-karavalivani
ಕೋಟ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ
ಪ್ರಾಯೋಜಿಸುವ ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ ಜೀವಸಂಕುಲ ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ಜನವರಿ ತಿಂಗಳ ದಿನಾಂಕ 12 ರಂದು ಬುಧವಾರ ರಾಷ್ಟ್ರೀಯ ಯುವದಿನ ಪ್ರಯುಕ್ತ ಸಂಜೆ 6 ಗಂಟೆಗೆ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಯುವಕರ ಪಾತ್ರ ಕುರಿತು ಕಾರ್ಯಕ್ರಮ ಪ್ರಸಾರವಾಗಲಿದೆ .ಯುವ ಸ್ವಚ್ಛಾಗ್ರಹಿ ಮತ್ತು ಪತ್ರಕರ್ತರಾಗಿರುವ ರವೀಂದ್ರಕುಮಾರ್ ಕೋಟ ಹಾಗೂ ಕೋಟ ಪಡುಕೆರೆಯ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಜನವರಿ 13 ಮಧ್ಯಾಹ್ನ 1ಗಂಟೆಗೆ ಇದರ ಮರುಪ್ರಸಾರವಿರುವುದು ಎಂದು ಮಣಿಪಾಲ್ ರೇಡಿಯೋ ಸಂಯೋಜಕಿ ರಶ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
